ರಾಜ್ಯದಲ್ಲಿ ಹೃದಯಾಘಾತ ದಿಂದ ಮೃತರಾಗುತ್ತಿರುವರ ಸಂಖ್ಯೆ ಆತಂಕ ಮೂಡಿಸುತ್ತಿದೆ. ಇತ್ತ ವಿಜಯಪುರದಲ್ಲೂ ಹೃದಯಾಘಾತ ದಿಂದ ವೈಧ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ 26 ವಯಸ್ಸಿನ ವೈಭವ ಕುಲಕರ್ಣಿ ಬೆಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಲ್ಲಿ MBBS ಕೊನೆ ವರ್ಷದಲ್ಲಿ ವ್ಯಾಸಂಗ ಮಾಡ್ತಿದ್ದ ವೈಭವ ತಮಿಳುನಾಡು ಟೂರ್ ಹೋಗಿದ್ದ. ವಾಪಸ್ ಬರೋ ಹೊತ್ತಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ವೈಭವ್ ಶವವನ್ನು ಆಲಮೇಲ ತಾಲೂಕಿನ ಸ್ವಗ್ರಾಮಕ್ಕೆ ಶವ ತೆಗೆದುಕೊಂಡು ಬರಲಾಗುತ್ತಿದೆ.