Kagawad

ಜೈನ ಸಮಾವೇಶದ ನಿಮಿತ್ಯ ಐನಾಪೂರದಲ್ಲಿ ಮಹಾಮಸ್ತಕಾಭಿಷೇಕ

Share

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಹಮ್ಮಿಕೊಂಡ ಜೈನ ಸಮಾವೇಶದ ನಿಮಿತ್ಯವಾಗಿ ಐನಾಪೂರ ಪಟ್ಟಣದಲ್ಲಿರುವ ಒಂದು ಸಾವಿರ ವರ್ಷದ ಇತಿಹಾಸ ಹೊಂದಿರುವ ಭಗವಾನ ಆದಿನಾಥ ಮಂದಿರದಲ್ಲಿ ಪುರಾತನ ಮೂರ್ತಿಗೆ ಮಂತ್ರಪಟನದೊಂದಿಗೆ 1008 ಹಾಲಿನ ಕಲಶ 1008 ಕಲ ಕಲಶ ಅಣ್ಟ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ನೆರವೆರಿಸಿ ಬೆಂಗಳೂರಿನಿಂದ ತಂದಿರುವ 1008 ಕಮಲ ಪುಷ್ಪಗಳಿಂದ ಅರ್ಚನೆ ಮಾಡಲಾಯಿತು.

ಶುಕ್ರವಾರದಂದ್ದು ರಾಷ್ಟ್ರ ಸಂತ ಗುಣಧರನಂದಿ ಮುನಿ‌ಮಹರಾಜರ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಟಾಚಾರಿಗಳ ಮಂತ್ರ ಪಟ್ಟನೆಗಳ ಮೂಲಕ ಮಹಾಮಸ್ತಕಾಭಿಷೇಕ ನೆರವೇರಿತು. ಮುನಿಗಳಾದ ಶ್ರವಣನಂದಿ‌ ಮುನಿ ಮಹರಾಜರು ತತ್ವಾರ್ಥ ನಂದಿ ಮುನಿ ಮಹರಾಜರು ಸಾನಿಧ್ಯವಹಿಸಿದ್ದರು.

ಒಂದು ಆನೆ ಐದು ಅಶ್ವಗಳು 1008 ಸುಮಂಗಲೆಯರು ಜಲ ಕಲಶವನ್ನು ತೆಗೆದುಕೊಂಡು ಜೈನ ಮಂದಿರದಿಂದ ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ಕಾರ್ಯಕ್ರಮ ನೆರವೆರುವ ಸ್ಥಳದ ವರೆಗೆ ಭವ್ಯ ಮೆರವಣಿಗೆ ಮೂಲಲಕ ಆಗಮಿಸಿದರು. ಆದಿನಾಥ ಜಿನ ಮಂದಿರ ಸಮಿತಿಯ ಎಲ್ಲ ಶ್ರಾವಕರು, ಸವಾಲುದಾರಿಗಳು ಮತ್ತು ಮುನಿಮಹರಾಜರ ಸಾನಿಧ್ಯದಲ್ಲಿ ಅಥಣಿ‌ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಇವರ ಹಸ್ತದಿಂದ ಮಂಟಪದ ಪ್ರವೇಶದ್ವಾರದ ಉದ್ಘಾಟನೆ ಹಾಗೂ ಜೈನ ಧರ್ಮದ ಧ್ಬಜಾರೋಹಣ ಕಾರ್ಯಕ್ರಮ ನೆರವೆರಿತು.

ಆಚಾರ್ಯ ರಾಷ್ಟ್ರಸಂತ ಗುಣಧರನಂದಿ ಮುನಿಮಹರಾಜರು ಪೂಜೆ ವಿಧಾನ ಬಗ್ಗೆ ಮಾತನಾಡುವಾಗ ಭಗವಾನ ಆದಿನಾಥ ಮೂರ್ತಿಗೆ ಪಂಚ ನದಿಗಳಿಂದ ಜಲವನ್ನ ತಂದು 1008 ಕಳಶಗಳ ಹಾಲು 1008 ಕಮಲ ಪುಷ್ಪಗಳು ಪೂಜಾ ವಿಧಾನದಲ್ಲಿ ಬಳಕೆ ಮಾಡಿ ವಿಶ್ವದ ಶಾಂತಿಗಾಗಿ ಹಾಗೂ ಕರೊನಾ ಮಹಾ ಮಾರಿ ತಡೆಗಟ್ಟಲು ಸಹದೋಷ ಔಷದ ಬಳಸಿ ಮಹಮಸ್ತಕಾಭಿಷೇಕ ನೆರವೆರಿಸಲಾಗಿದೆ ಎಂದರು.

ಮಂಟಪದಲ್ಲಿ ಗುಣಧರನಂದಿ ಮುನಿ ಮಹರಾಜರ ಸಾನಿಧ್ಯದಲ್ಲಿ ಶ್ರೀನಿವಾಸ ಪಾಟೀಲ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ಚೀಕರಿಸೊ ಮಾತನಾಡುವಾಗ ಜೈನ ಧರ್ಮ ಪವಿತ್ರವಾದ ಧರ್ಮ ಇದ್ದು, ವಿಶ್ವಕೆ ಅಹಿಂಸಾ ತತ್ವಗಳು ಸಾರಿ ಹೇಳುತ್ತಿರುವ ಈ ಧರ್ಮದ ಆಚರಣೆ ಇನ್ನೂಳಿದ ಧರ್ಮಗಳು ಮಾಡಬೇಕು, ನಾನು ಮರಾಠ ಸಮಾಜದವನಾಗಿದ್ದರು ನನ್ನ ತಂದೆ ತಾಯಿ ಬಂಧುಗಳಿ ಸಸ್ಯಾಹಾರಿ ಆಗಿದ್ದೇವೆ. ಜೈನ ಧರ್ಮದ ತತ್ವಗಳು ಪಾಲಿಸುತ್ತಿದ್ದೇವೆ. ಈ ಧರ್ಮದ ಅಭಿವೃದ್ದಿಗಾಗಿ ನಮ್ಮಗೆ ಯಾವುದೇ ಜವಾಬ್ದಾರಿ ನೀಡಿದರೆ ಅದನ್ನ ನಾವು ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಜೈನ ಸಮಾವೇಶದ ಅಧ್ಯಕ್ಷ ಸುನೀಲ ಪಾಟೀಲ, ಸಮಾಜದ ಮುಖಂಡರಾದ ದಾದಾ ಪಾಟೀಲ, ನ್ಯಾಯವಾದಿ ಸಂಜಯ ಕುಚನೂರೆ, ನಿವೃತ ಅಭಿಯಂತರರಾದ ಅರುಣ ಯಲಗುದ್ರಿ ಸೇರಿದಂತೆ ಬಹುಸಂಖ್ಯೆ ಇಂದ ಜಯುನ ಸಮಾಜದ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು, ಶ್ರಾವಕಿಯರಿಂದ ಪೂಜಾ ವಿಧಾನ ಕಾರ್ಯಕ್ರಮ ನೆರವೆರಿತ್ತು ನಂತರ ಗುಣಧರನಂದಿ ಮುನಿ ಮಹರಾಜರು ಆಶೀರ್ವಚನ ನೀಡಿದರು.

ಸುಕುಮಾರ ಬನ್ನೂರೆ ಇನ್ ನ್ಯೂಸ್ ಕಾಗವಾಡ

Tags:

error: Content is protected !!