ನನ್ನ ಮಗಳು ಎಂ ಎಸ ಸಿ ಪದವಿಧರಳಾಗಿದ್ದು, ಅವಳು ಆತ್ಮಹತ್ಯ ಮಾಡುಕೊಳ್ಳುವ ಹೇಡಿಯಲ್ಲ. ನನ್ನ ಮಗಳ ಸಾವು ಆತ್ಮಹತ್ಯೆಯಲ್ಲ ಅದು ಕೊಲೆಯಾಗಿದ್ದು, ರಾಜಕೀಯ ಒತ್ತಡದಿಂದಾಗಿ ಕಾಗವಾಡ ಪೋಲಿಸರು ಸರಿಯಾಗಿ ತನಿಖೆ ಮಾಡದೇ ದಾರಿತಪ್ಪಿಸುತ್ತಿದ್ದು, ಆರೋಪಿಗಳನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ನನ್ನ ಮಗಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಮಹಾರಾಷ್ಟçದ ಶಿರೋಳ ತಾಲೂಕಿನ ಕವಟೆಸಾರ ಗ್ರಾಮದ ತಂದೆ-ತಾಯಿಗಳು ಕಣ್ಣಿರು ಹಾಕುತ್ತ ಅಂಗಲಾಚಿರುವ ಘಟನೆ ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಭವಿಸಿದೆ.
ಗುರುವಾರ ದಿ. 12 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ ಪೋಲಿಸ್ ಬೆಳಗಾವಿಯ ಡಿವೈಎಸ್ಪಿ ಭರತ ರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಈ ದೃಷ್ಯ ಕಂಡುಬಂದಿತು.ಈ ವೇಳೆ ತಂದೆ ಸತ್ಯಪ್ಪಾ ಪಾಟೀಲ ಮಾತನಾಡಿ, ಶಿರೋಳ ತಾಲೂಕಿನ ಕವಟೆಸಾರ ಗ್ರಾಮದವರಾದ ನಾವು ನಮ್ಮ ಮಗಳು ಧನಶ್ರೀ ಇವಳನ್ನು ಮಂಗಸೂಳಿ ಗ್ರಾಮದ ಚೇತನ ಮಾಲದಾರ ಇತನ ಜೊತೆ ವಿವಾಹ ಮಾಡಿದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ನನ್ನ ಮಗಳು ಸಾವನ್ನಪ್ಪಿದ್ದು, ಗಂಡನ ಮನೆಯವರು ಧನಶ್ರೀ ಅವಳು ಆತ್ಮಹತ್ಯ ಮಾಡಿಕೊಂಡಿದ್ದಾಳೆAದು ಹೇಳುತ್ತಿದ್ದಾರೆ. ಆದರೇ ಅದು ಆತ್ಮಹತ್ಯೆ ಅಲ್ಲ. ಅದು ಕೊಲೆಯಾಗಿದ್ದು, ಈ ಕುರಿತು ಕಾಗವಾಡ ಪೋಲಿಸರು ನಮಗೆ ನ್ಯಾಯ ಒದಗಿಸುಕೊಡುವಲ್ಲಿ ಸಹಕಾರ ನೀಡುತ್ತಿಲ್ಲ. ರಾಜಕೀಯ ಒತ್ತಡದಿಂದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ನಾವು ಜಿಲ್ಲಾ ನ್ಯಾಯಾಲಯ, ಹೈಕೋರ್ಟ ಮತ್ತು ಸೂಪ್ರೀಮ್ ಕೋರ್ಟನಲ್ಲಿ ಪ್ರಕರಣ ಹೂಡಿದ್ದು, ಕಾಗವಾಡ ಪೋಲಿಸರು ಚಾರ್ಚ ಸೀಟ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ನಮಗೆ ನ್ಯಾಯ ಒದಗಿಸಬೇಕೆಂದು ಬೇಡಿಕೊಂಡರು.
ಲೋಕಾಯುಕ್ತ ಅಧಿಕಾರಿ, ಅಥಣಿ ಡಿವೈಎಸ್ಪಿ ಅವರಿಗೆ ಪ್ರಕರಣ ತನಿಖೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಚ್ಚರಿಯ ವಿಷಯವೆನೆಂದರೇ ಸತ್ಯಪ್ಪಾ ಪಾಟೀಲ ದಂಪತಿಗಳು ಮಾಧ್ಯಮದವರಿಗೆ ಮಾಹಿತಿ ನೀಡಲು ಹೋಗುತ್ತಿರುವಾಗ ಇದರ ಎಲ್ಲ ತನಿಖೆ ನಾವು ಮಾಡುವವರು, ಮಾಧ್ಯಮದರೇನು ಮಾಡುತ್ತಾರೆ. ಅವರಿಗೇನು ಹೇಳುತ್ತಿದ್ದಿರಿ ಎಂದು ಓರ್ವ ಪೋಲಿಸ್ ಅಧಿಕಾರಿ ಹೇಳಿ ವ್ಯಂಗ ಮಾಡಿದ್ದರಿಂದ ಈ ಘಟನೆ ಇನ್ನಷ್ಟು ಪುಷ್ಟಿ ದೊರೆತಂದಾಗಿದೆ.
ಲೋಕಾಯುಕ್ತರ ಮುಂದೆ ಬೆರಳೆಣಿಕೆಯಷ್ಟು ಜನ ಮಾತ್ರ ತಮ್ಮ ಅವಹಾಲ ನೀಡಲು ಬಂದಿರುವುದನ್ನು ನೋಡಿದರೇ ಈ ಸಭೆ ಕಾಟಾಚಾರದ ಜನಸಂಪರ್ಕ ಸಭೆಯಾಗಿದೆ ಎಂದು ಸ್ಪಷ್ಟವಾಗುತ್ತದೆ.ಸಭೆಯಲ್ಲಿ ಕಾಗವಾಡದ ಗ್ರಾಮಸ್ಥ ಅರುಣ ಜೋಶಿ ಇವರು ತಮ್ಮ ಚುನಾವಣೆಯಲ್ಲಿ ಮತಪತ್ರಿಕೆ ತಪ್ಪಿಸಿ, ನನನ್ನು ಪರಾಭವ ಮಾಡಿದ್ದು, ತನಿಖೆ ಕೈಗೊಳ್ಳುವಂತೆ ಬೇಡಿಕೊಂಡರು. ಕಾಗವಾಡದ ಬಸವನಗರದ ಕಾಲಿನಿಯಲ್ಲಿ ರಸ್ತೆ ನಿರ್ಮಿಸುವ ಬಗ್ಗೆ ಹಾಗೂ ಐನಾಪೂರದ ಓರ್ವ ವ್ಯಕ್ತಿ ತನ್ನ ಜಮೀನಿನ ಹದ್ದುಬಸ್ತ ಕಳೆದ ಒಂದು ವರ್ಷದಿಂದ ಮಾಡದೇ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆಂದು ದೂರು ಸಲ್ಲಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಭರತ ರೆಡ್ಡಿ ಮಾತನಾಡಿ, ಕಾಗವಾಡ ಹೊಸ ತಾಲೂಕು ರಚನೆಯಾದ ಬಳಿಕ ಪ್ರಥಮ ಬಾರಿಗೆ ಈ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರಲಿಲ್ಲ. ಇದರಿಂದ ಕಡಿಮೆ ಜನ ಸಭೆಗೆ ಆಗಮಿಸಿದ್ದಾರೆ. ಇನ್ನೂ ಮುಂದೆ ಜನರಿಗೆ ಸೂಚನೆ ನೀಡಿ, ಸಭೆ ಹಮ್ಮಿಕೊಳ್ಳಲಾಗುವುದು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು ಎಂದು ಸೂಚನೆ ನೀಡಿದರು.
ಲೋಕಾಯುಕ್ತ ಪಿಐ ರವಿಕುಮಾರ ಧರ್ಮಟ್ಟಿ ಮಾತನಾಡಿ, ತಾಲೂಕಿನ ಅನೇಕ ಇಲಾಖೆಗಳ ಕಾರ್ಯ ವೈಖರಿಯ ಕುರಿತು ಅನೇಕ ದೂರುಗಳು ಬಂದಿದ್ದು, ಶೀರ್ಘವಾಗಿ ತನಿಖೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಂಗಾ ಬಿರಾದರ, ಸಿಡಿಪಿಓ ಸಂಜೀವಕುಮಾರ ಸದಲಗಿ, ಬಿಇಓ ಎಂ.ಆರ್. ಮುಂಜೆ, ನೀರಾವರಿ ಇಲಾಖೆಯ ಪ್ರಶಾಂತ ಪೋತರಾರ, ಪ್ರವೀಣ ಪಾಟೀಲ, ರವೀಂದ್ರ ಮುರಗಾಲಿ, ಕೃಷಿ ಇಲಾಖೆಯ ನಿಂಗನಗೌಡಾ ಬಿರಾದರ, ಸಮಾಜಕಲ್ಯಾಣ ಇಲಾಖೆಯ ಬಸವರಾಜ ಯಾದವಾಡ, ಬಿಸಿಎಂ ಇಲಾಖೆಯ ವೆಂಕಟೇಶ ಕುಲಕರ್ಣಿ, ಪಶು ಇಲಾಖೆಯ ಎಂ.ಎನ್. ಕಾಂಬಳೆ, ಸಬ್ ರಜಿಸ್ಟçರ್ ರಾಜಶೇಖರ ಮುಕ್ಕನ್ನವರ, ವೈದ್ಯಾಧಿಕಾರಿ ಡಾ. ಬಸಗೌಡಾ ಕಾಗೆ, ಪಪಂ.ನ ಮುಖ್ಯಾಧಿಕಾರಿಗಳಾದ ಮಹಾಂತೇಶ ಕೌಲಾಪೂರ, ಕೆ.ಕೆ. ಗಾವಡೆ ಸೇರಿದಂತೆ ತಾಲೂಕಿನ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.