ಕಾಗವಾಡ: ರಾಜ್ಯ ಸರ್ಕಾರ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮದಭಾವಿ ಹಾಗೂ ಅನಂತಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ೩೩
ಗ್ರಾಮಗಳಿಗೆ ಬಹುಗ್ರಾಮಗಳ ಕುಡಿಯುವ ನೀರು ಯೋಜನನೆ ಪುನಶ್ಚೇತನÀಗಾಗಿ ೫೩.೪೨ ಕೋಟಿ ರೂಪಾಯಿ ಯೋಜನೆಗೆ ಕಾಗವಾಡ ಶಾಸಕ ರಾಜು ಕಾಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗುರುವಾರ ಸಂಜೆ ಮದಬಾವಿ ಹಾಗೂ ಪ್ರಾರ್ಥನಹಳ್ಳಿ ಗ್ರಾಮದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು, ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಶಾಸಕ ರಾಜು ಕಾಗೆ ಮುಂದುವರೆದು ಮಾತನಾಡುವಾಗ ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳು ನೀಡುತ್ತಿದೆ ಆದರೆ ಯೋಜನೆಗಳು ಸಾರ್ವಜನಿಕರದಾಗಿದ್ದು ಕಾಮಗಾರಿಗಳು ಗುಣಮಟ್ಟದಿಂದ ಪೂರ್ಣಗೊಳ ಬೇಕಾದರೆ ಕೇವಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಗಾ ವಹಿಸಿದರೆ ಸಾಲದು ಸಾರ್ವಜನಿಕರು ಕೂಡಾ ಕಾಮಗಾರಿ ನಡೆಯುವ ವೇಳೆ ನಿಗಾ ವಹಿಸುವ ಮೂಲಕ ಗುಣಮಟ್ಟದ ಹಾಗೂ ಅವಧಿಯಲ್ಲಿ ಕಾಮಗಾರಿ ಆಗವುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಗುರುವಾರ ರಂದು ಕಾಗವಾಡ ಮತ ಕ್ಷೇತ್ರದ ಮದಬಾವಿ ಹಾಗೂ ಪಾರ್ಥನಳ್ಳಿದಲ್ಲಿ ೩೩ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ೫೩.೪೨ ಕೋಟಿ ಅನುದಾನದಲ್ಲಿ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಸರಕಾರ ಸಾರ್ವಜನಿಕರು ನೀಡುವ ತೆರಿಗೆ ಹಣದಿಂದಲೇ ಸಾರ್ವಜನಿಕರಿಗಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತದೆ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕೂಡ ತಮ್ಮ ಸ್ವಂತ ಕೆಲಸಗಳ0ತೆ ನಿಗಾ ವಹಿಸಿದಲ್ಲಿ ೧೫ ವರ್ಷ ಹಿಂದೆ ಪೂರ್ಣಗೊಂಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಪುನಶ್ಚೇತನ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲಾ ಎಂದು ಸಾರ್ವಜನಿಕರಿಗೆ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬೆಂಗಳೂರುನಲ್ಲಿ ನಡೆದ ಕಾಲ್ತುಳಿದಲ್ಲಿ ಮೃತರಾದವರಿಗೆ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ರವೀಂದ್ರ ಮುರಗಾಲಿಮಾತನಾಡಿ ಈ ವೇಳೆ ಮುಖಂಡರಾದ ವಿನಾಯಕ ಬಾಗಡಿ, ಮಹಾದೇವ ಕೋರೆ, ಗೂಳಪ್ಪ ಜತ್ತಿ, ಬಸನಗೌಡ ಪಾಟೀಲ, ಶಿವಾನಂದ ಗೊಲ್ಲಬಾಂವಿ, ಎಇಇ ಪ್ರವೀಣ ಮಠಪತಿ, ರವೀಂದ್ರ ಮೂರಗಾಲಿ, ವೀರಣ್ಣ ವಾಲಿ, ಇಒ ಶಿವಾನಂದ ಕಲ್ಲಾಪೂರ, ಕಿರಣ ಮಾಳಿ, ಅಕ್ಷಯ ಚುನಮೂರೆ, ಬಸವರಾಜ ಪಾಟೀಲ, ಮಾಲು ಕನ್ಸಟ್ರಕ್ಷನ್ ನ ಗುತ್ತಿಗೆದಾರರಾದ ಮಲ್ಲಪ್ಪ ಮೇಲಿನಮನೆ, ನವೀನ ನಾಗನೂರೆ, ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ