ಕಾಗವಾಡ ತಾಲೂಕಿನ ಜುಗುಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿಯ ಶಹಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಗ್ರಾಮದಲ್ಲಿ ಇರುವ ಸ್ಮಶಾನಭೂಮಿ ಸ್ಥಳಕ್ಕೆ ಹಾಕಿಸಿದ ತಂತೆ ಬೇಲಿ ಗ್ರಾಮ ಪಂಚಾಯಿತಿ ಅಧಿಕಾರಿ ತೆಗೆದ ಹಾಕಿದರಿಂದ ಎಲ್ಲ ಸಾರ್ವಜನಿಕರು ಮತ್ತೆ ತಂತೆ ಬೇಲಿ ಹಾಕಿರಿ ಎಂದು ಕೇಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಒಂದುಗೂಡಿ ಪ್ರತಿಭಟನೆ ಕೈಗೊಂಡರು. ಮಂಗಳವಾರ ರಂದು ಜುಗುಳ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಶಹೋಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಮಾದಗೌಡ ಪಾಟೀಲ, ವಿಜಯ ನಾಯ್ಕ್, ಪ್ರಮೋದ ಪಾಟೀಲ, ಸಂತೋಷ ಪಾಟೀಲ, ಬೋಲಾ ಕಮತೆ, ತುಕಾರಾಂ ಕಾಂಬಳೆ, ವಿಠ್ಠಲ ಕಾಂಬಳೆ, ಚಿದಾನಂದ ಕಾಂಬಳೆ, ಶ್ರೀಮತಿ ಕಮಲ ಕಾಂಬಳೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಒಂದುಗೂಡಿ ಗ್ರಾಮ ಪಂಚಾಯಿತಿಗೆ ಆಗಮಿಸಿ ಪಂಚಾಯಿತಿ ಎದುರು ಪ್ರತಿಭಟನೆ ಕೈಗೊಂಡರು.
ಶಹಾಪೂರ ಗ್ರಾಮದ ಸರ್ವೆ ನಂಬರ 152 ರಲ್ಲಿಯ ಎರಡು ಎಕರೆ ಜಮೀನು ಸಂಕೇಶ್ವರ ಮಠದ ವತಿಯಿಂದ ಶಹಾಪುರ ಗ್ರಾಮದ ಸಾರ್ವಜನಿಕರಿಗೆ ಸನ 1968 ರಲ್ಲಿ ನೀಡಿದ್ದಾರೆ. ಈ ಸ್ಥಳ ಲಿಂಗಾಯಿತ ಸಮಾಜ ಸ್ಮಶಾನ ಭೂಮಿ ಎಂದು ದಾಖಲೆ ಇದೆ. ಈ ಸ್ಥಳದಲ್ಲಿ ಬೇರೆ ಬೇರೆ ಸಮಾಜಕ್ಕಾಗಿ ಅಂತ್ಯಕ್ರಿಯೆ ಮಾಡಲು ಸ್ಥಳೀಯವರು ನೀಡಿದ್ದು ತಂತಿ ಬೇಲೆ ಹಾಕಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಇವರು ಪಂಚಾಯತಿಯಿಂದ ಯಾವುದೇ ಮಂಜೂರಾತಿ ಪಡೆಯದೆ ತಂಟೆಬೆಲೆ ಹಾಕಿದ್ದಾರೆ ಎಂದು ಹೇಳಿ ಅದನ್ನು ತೆಗೆದ ಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸ್ಥಳಕ್ಕೆ ತಹಸಿಲ್ದಾರ ರಾಜೇಶ್ ಬುರ್ಲಿ, ತಾಲೂಕ ಪಂಚಾಯಿತಿ ಅಧಿಕಾರಿ ವೀರಣ್ಣ ವಾಲಿ, ಪಿಎಸ್ಐ ಗಂಗಾ ಬಿರಾದಾರ ಇವರು ಭೇಟಿ ನೀಡಿ ತಂತಿ ಬೇಲಿ ತೆಗೆದ ಹಾಕಿದರು. ಈ ಕಾರಣ ಶಹಪುರ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡು ಮರಳಿ ತಂತಿ ಮೇಲೆ ಹಾಕಿರಿ ಎಂಬ ಬೇಡಿಕೆ ಇಟ್ಟಿದ್ದರು.
ಕಾಗವಾಡ ತಹಸಿಲ್ದಾರ ಕಚೇರಿಯ ಗ್ರೇಡ್ 2 ತಹಶೀಲ್ದಾರ ಶ್ರೀಮತಿ ರಶ್ಮಿ ಜಕಾತೆ, ತಾಲೂಕ ಪಂಚಾಯತಿ ಅಧಿಕಾರಿ ವೀರಣ್ಣ ವಾಲಿ, ಪಿಎಸ್ಐ ಶ್ರೀಮತಿ ಗಂಗಾ ಬಿರಾದರ, ಗ್ರಾಮ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲೇಶ್ರೀ ಭಜಂತ್ರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎಲ್ಲ ಸಾರ್ವಜನಿಕರ ಬೇಡಿಕೆಗಳು ಆಲಿಸಿ ತಹಶೀಲ್ದಾರ ರಾಜೇಶ ಬುರ್ಲಿ ಎರಡು ದಿನ ರಜೆಯಲ್ಲಿ ಇದ್ದು ಅವರು ಕರ್ತವ್ಯಕ್ಕೆ ಹಾಜೀರ ಆದ ಕೂಡಲೇ ನಿಮ್ಮ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ನ್ಯಾಯ ನೀಡುವದಗಿ ಭರವಸಿ ನೀಡಿದರು. ಇದನ್ನು ಗಮನಿಸಿದ ಎಲ್ಲ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದರು.
ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಪ್ರತಿಭಟನೆಕಾರರು ತಮ್ಮ ಆಕ್ರೋಶ ಹೊರ ಹಾಕಿದರು.
ಬೆಳಗ್ಗೆಯಿಂದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಕೈಗೊಂಡಿದ್ದಾಗ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅನೇಕ ಸದಸ್ಯರು ಸ್ಥಳಕ್ಕೆ ಆಗಮಿಸದೆ ಇರುವುದರಿಂದ ಚರ್ಚೆಗೆ ಗ್ರಾಸವಾಗಿತ್ತು.