BELAGAVI

ಸಚಿವ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆಗೆ ಪ್ರೇರಿತಗೊಂಡು ಮನೆಗೆ “ಬಂಧುತ್ವ ನಿಲಯ”ಎಂದು ಹೆಸರಿಟ್ಟ ಅಭಿಮಾನಿ

Share

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಬಂಧುತ್ವ ವೇದಿಕೆಯಿಂದ ಪ್ರೇರಿತಗೊಂಡ ಕೆಪಿಸಿಸಿ ಸಂಯೋಜಕ ಪಿ.ಕೆ.ನೀರಲಕಟ್ಟಿ ಅವರು ಇಟಗಿ ಕ್ರಾಸ್ ಬಳಿ ಇರುವ ಹೊಸ ಕಾದರವಳ್ಳಿಯಲ್ಲಿ ಮೂರು ದ್ವಾರದ ಮನೆಯನ್ನು ಕಟ್ಟಿದ್ದಾರೆ ಪ್ರತಿ ದಿನವೂ ಸಚಿವ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಪಿ.ಕೆ ಅವರ ಮಾನವ ಬಂಧುತ್ವ ವೇದಿಕೆಯಿಂದ ಪ್ರೇರಿತಗೊಂಡ ತನ್ನ ಕನಸಿನ ಮನೆಯನ್ನು ಕಟ್ಟಿದ್ದಾರೆ ಮನೆಯ ದ್ವಾರಗಳ ಮೇಲೆ ಕೆತ್ತಿಸಿದ ಭಾವಚಿತ್ರ ನೋಡಿದರೆ ಮಾತಿನಲ್ಲಿಯೂ ಬಂಧುತ್ವ ಆಚಾರ ವಿಚಾರ ಸಂಸ್ಕೃತಿಗಳಲ್ಲೂ ಬಂಧುತ್ವ ಅಳವಡಿಸಿಕೊಂಡು ಒಂದು ದ್ವಾರಕ್ಕೆ ಬುದ್ಧ ಇನ್ನೊಂದು ದ್ವಾರಕ್ಕೆ ಬಸವ, ಇನ್ನೊಂದು ದ್ವಾರಕ್ಕೆ ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಮೂಡಿಸಿಕೊಂಡು ಒಂದು ಆದರ್ಶ ಸಮಾನತೆಯ ಸಮಾಜವನ್ನು ಕಟ್ಟಲು ನಿಟ್ಟಿನಲ್ಲಿ ಸಾಗಿರುವುದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮನೆಯಲ್ಲಿ ಪ್ರವೇಶ ಮಾಡುವ ಮೊದಲು ಎಲ್ಲರೂ ಸಮಾನರು ಎಂಬ ಬಂಧುತ್ವದ ಒಂದು ಪರಿಮಳ ಮೂಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ.

Tags:

error: Content is protected !!