ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಂಡೆ ನಗರದ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದರು. ಕೈಗೆ ಹ್ಯಾಂಡಲೋಸ ಹಾಕಿಕೊಂಡು ಸ್ವತಃ ತಾವೇ ರಸ್ತೆ ಬದಿಯ ಗೀಡಗಂಟೆಗಳನ್ನು ತೆಗೆದು ಒಟ್ಟುಗೂಡಿಸಿ, ತ್ಯಾಜ್ಯ ತೆಗೆದುಕೊಂಡು ಹೋಗುವ ವಾಹನಕ್ಕೆ ಹಾಕುವ ಮೂಲಕ ಇತರರಿಗೂ ಮಾದರಿಯಾದರು.
ವೈ- ಹೌದು ಧಾರವಾಡ ನಗರದ ಮಾಳ್ಳಮಡ್ಡಿಯ ರೈಲ್ವೆ ಸ್ಟೇಷನ್ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್ ಅವರು ಭಾಗಿಯಾಗಿ ಸ್ವಚ್ಚ ಮಾಡಿದರು. ರಸ್ತೆಯ ಅಕ್ಕಪಕ್ಕದ ಬೀದಿಗಳಲ್ಲಿಯು ಕಾಲುವೆಗಳ ಮೇಲೆ ಬೆಳೆದ ಗೀಡ ಗಂಟೆಗಳನ್ನು ತೆರವು ಮಾಡಿದರು. ಜತೆಗೆ ಪೌರಕಾರ್ಮಿಕರು ತೆಗೆದುಕೊಟ ಕಸವನ್ನು ಇತರರಿಗೆ ನೀಡಿ ವಾಹನಕ್ಕೆ ಹಾಕಿಸಿದರು. ಈ ಸ್ವಚ್ಚತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ಜಿಲ್ಲಾಧಿಕಾಧಿಕಾರಿ ದಿವ್ಯಪ್ರಭು ಅವರು ಉಸ್ತುವಾರಿ ಸಚಿವರಿಗೆ ಸಾಥ್ ನೀಡಿದ್ದು, ಸ್ವಚ್ಚ ಮಾಡುವ ವಿದ್ಯಾರ್ಥಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಉಸ್ತುವಾರಿ ಸಚಿವರು ಹುರುದುಂಬಿಸಿದರು. ಜತೆಗೆ ಇದೇವೇಳೆ ನಿರಂತರ ಮಳೆಯಿಂದಾಗುತ್ತಿರುವ ಕಾಲುವೆ, ಚರಂಡಿ ಬ್ಲಾಕ್ ಸಮಸ್ಯೆಗಳ ಕುರಿತು ಸ್ಥಳೀಯರ ಸಮಸ್ಯೆ ಆಲಿಸಿದರು. ಜಿಲ್ಲಾ ಉಸ್ತವಾರಿ ಸಚಿವರು ಜಿಟಿ ಜಿಟಿ ಮಳೆಯ ನಡುವೆಯೂ ಸ್ವಚ್ಚತಾ ಕಾರ್ಯವು ಇತರೆ ಸಚಿವರಿಗೆ ಸೇರಿ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.