Bagalkot

ಜಮಖಂಡಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮಣ್ಣು ಮಾಫಿಯಾ!!!

Share

ಜಮಖಂಡಿ ಭಾಗದಲ್ಲಿ ಮತ್ತೇ, ಮಣ್ಣು ಮಾಫಿಯಾ ಮುಂದುವರೆದಿದೆ. ಕೃಷ್ಣಾ ನದಿ ಪಕ್ಕದಲ್ಲಿ ಅಕ್ರಮ ಮಣ್ಣು ಮಾಫಿಯಾ ಎಗ್ಗಿಲ್ಲದೇ ಸಾಗಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿಯಲ್ಲಿರುವ ಕೃಷ್ಣೆಯ ಪಕ್ಕದಲ್ಲಿ ಇಟ್ಟಿಗೆ ಭಟ್ಟಿ ಮಾಲೀಕರಿಂದ ಮಣ್ಣು ಲೂಟಿ ಮಾಡಲಾಗುತ್ತಿದೆ. ಹಾಡಹಗಲೇ ಎಗ್ಗಿಲ್ಲದೇ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದರೂ ಕೂಡ ಜಮಖಂಡಿ ತಾಲ್ಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ.

ಸರ್ಕಾರ ಭೂ ಸ್ವಾಧೀನ ಪಡೆದ ಕೃಷ್ಣಾ ನದಿ ವ್ಯಾಪ್ತಿಯ ಮುಳುಗಡೆ ಜಮೀನಿನಲ್ಲಿ ಮಣ್ಣು ಲೂಟಿ ಮಾಡಲಾಗುತ್ತಿದೆ. ಜೆಸಿಬಿ & ಟ್ರಾಕ್ಟರ್’ಗಳನ್ನ ಬಳಸಿ ಮಣ್ಣು ಲೂಟಿ ಮಾಡಲಾಗುತ್ತಿದೆ. ಅಕ್ರಮ ದಂಧೆಕೊರರ ಗಿಂಬಳಕ್ಕೆ ಬಲಿಯಾದ ತಾಲ್ಲೂಕಾಡಳಿತ, ಜಿಲ್ಲಾ ಮೈನಿಂಗ್ ಇಲಾಖೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Tags:

error: Content is protected !!