ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಹತ್ತಿರದ ಅಲದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳಿಯ ಅತಿಥಿ ಶಿಕ್ಷಕಿಯರ ಗೋಳು ಯಾರು ಕೇಳದಂತಾಗಿದೆ, ಈ ಶಾಲೆಯ ಮುಖ್ಯೋಪಾಧ್ಯಾಯ ಪ್ರವೀಣ ಗೊಂದಿ ಏಕಪಕ್ಷಿಯ ನಿರ್ಧಾರದಿಂದ ಹಲವಾರು ವರ್ಷಗಳಿಂದ ಅತಿಥಿ ಶಿಕ್ಷಕಿಯರಾಗಿ ಸ್ಥಳಿಯ ವಿದ್ಯಾವಂತ ನಿರುದ್ಯೋಗಿ ಗಳಾದ
ಶಾಂತವ್ವಾ ಭಿಮವ್ವಾ ಕೊಂಕಣಿ, ಸವಿತಾ ಹನಮಾಪುರೆ, ಯಲ್ಲವ್ವಾ ಪಾಟೀಲ, ಸುನಿತಾ ಅಜ್ಜನ್ನವರ ಎಂಬುವವರು ಕಾರ್ಯನಿರ್ವಹಿಸುತ್ತಿದ್ದರು ಆದರೆ ಈ ವರ್ಷ ಮುಖ್ಯೋಪಾಧ್ಯಾಯ ಪ್ರವೀಣ ಗೊಂದಿ ಎಸ್ ಡಿ ಎಂ ಸಿ ಮತ್ತು ಗ್ರಾಮ ಪಂಚಾಯತ ಸದಸ್ಯರ ಹಾಗೂ ಪಾಲಕರ ವಿರೋಧದ ನಡುವೆ ಬೇರೆ ಗ್ರಾಮದ ಶಿಕ್ಷಕಿಯರನ್ನು ನೇಮಕ ಮಾಡಿಕೊಂಡು ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸ್ಥಳಿಯ ಶಿಕ್ಷಕಿಯರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವಕಾಶ ವಂಚಿತ ಶಿಕ್ಷಕಿಯರ ಅಳಲಾಗಿದೆ.
ಗ್ರಾಮ ಪಂಚಾಯತ ಮತ್ತು ಎಸ್ ಡಿ ಎಂ ಸಿ ಸದಸ್ಯ ಭೈರು ತಿಪ್ಪಣ್ಣಾ ಪಾಟೀಲ ಮಾತನಾಡಿ ಮುಖ್ಯೋಪಾಧ್ಯಾಯ ಶಾಲೆಯ ಯಾವುದೇ ವಿಷಯವನ್ನು ನಮ್ಮ ಗಮನಕ್ಕೆ ತರದೆ ನಿರ್ಧಾರ ತಗೆದುಕೊಳ್ಳುತ್ತಾರೆ ,ಅತಿಥಿ ಶಿಕ್ಷಕಿಯರ ನೇಮಕ ಕುರಿತು ಪ್ರಶ್ನಿಸಿದರೆ ಸರಿಯಾದ ಉತ್ತರ ನಿಡುವದಿಲ್ಲಾ ನಮ್ಮ ಗ್ರಾಮದ ಸಮಸ್ಯೆಗಳನ್ನು ನಾವೆ ಬಗೆಹರಿಸಲು ಆಸ್ಪದ ನಿಡುತ್ತಿಲ್ಲಾ ಎಂದು ಆರೋಪಿಸಿದರು
ಗ್ರಾಮಸ್ಥರಾದ ಸಂತೋಷ ಪಾಟೀಲ ಮಾತನಾಡಿ ಮುಖ್ಯೋಪಾಧ್ಯಾಯ ಪ್ರವೀಣ ಗೊಂದಿ ಯವರ ಉದ್ಧಟತನದಿಂದ ನಮ್ಮ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಈಗಿರುವ ಅತಿಥಿ ಶಿಕ್ಷಕಿಯರನ್ನು ಮುಂದುವರೆಸ ಬೇಕು ಎಂದು ಆಗ್ರಹಿಸಿದರು.
ಉದ್ಯೋಗ ವಂಚಿತ ಶಿಕ್ಷಕಿ ಶಾಂತವ್ವಾ ಕೊಂಕಣಿ ಮಾತನಾಡಿ ನಮಗೆ ಆದ ಅನ್ಯಾಯದ ಬಗ್ಗೆ ಸಚಿವ ಸತೀಶ ಜಾರಕಿಹೋಳಿ ಯವರ ಆಪ್ತ ಸಹಾಯಕ ದಯಾನಂದ ಪಾಟೀಲರ ಗಮನಕ್ಕೆ ತಂದಾಗ ಅವರು ಶಾಲೆಗೆ ಬಂದು ಎಚ್ ಎಂ ರವರಿಗೆ ಹೇಳಿದರೂ ಸಹ ಕ್ಯಾರೆ ಎನ್ನದೆ ಸ್ವತಃ ಸಚಿವ ಸತಿಶ ಜಾರಕಿಹೋಳಿ ಯವರು ಬಂದು ಹೇಳಿದರು ನಾನು ಕೆಳುವದಿಲ್ಲಾ ಎಂದು ಹೇಳುತ್ತಾರೆ ,ಕಳೆದ ಹಲವಾರು ವರ್ಷಗಳಿಂದ ಸರ್ಕಾರ ನೀಡಿದ ಗೌರವ ಧನ ಪಡೆದು ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ನಮಗೆ ಮತ್ತೆ ಅವಕಾಶ ನೀಡಬೇಕು ಎಂದು ವಿನಂತಿಸಿದರು
ಅದೆ ರೀತಿ ಇನ್ನೂಳಿದ ಶಿಕ್ಷಕಿಯರಾದ ಸವಿತಾ ಹನಮಾಪುರೆ, ಯಲ್ಲವ್ವಾ ಪಾಟೀಲ, ಸುನಿತಾ ಅಜ್ಜನ್ನವರ ತಮ್ಮ ಅಳಲನ್ನು ಮಾದ್ಯಮಗಳಿಗೆ ತೊಡಿಕೊಂಡು ನಮಗೆ ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿ ಜೀವನ ಸಾಗಿಸಲು ಅನವು ಮಾಡಿಕೊಡಬೇಕು ಎಂದು ವಿನಂತಿಸಿದರು
ಶಿಕ್ಷಣ ಪ್ರೇಮಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಸ್ವ ಕ್ಷೇತ್ರದ ಅಲದಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯ , ಅತಿಥಿ ಶಿಕ್ಷಕಿಯರ ಹಾಗೂ ಎಸ್ ಡಿ ಎಂ ಸಿ ಸದಸ್ಯರ ಮತ್ತು ಗ್ರಾಮಸ್ಥರ ನಡುವಿನ ಗುದ್ದಾಟದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಈಗಲಾದರೂ ಚಿಕ್ಕೋಡಿ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಆರ್ ಸಿತಾರಾಂ ಹಾಗೂ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಮದ್ಯಸ್ಥಿಕೆ ವಹಿಸಿ ವಂಚಿತರಿಗೆ ನ್ಯಾಯ ವದಗಿಸುವ ಕಾರ್ಯ ಮಾಡಬೇಕಾಗಿದೆ.
ದೇವರು ಕೊಟ್ಟರು ಪೂಜಾರಿ ಕೊಡುವದಿಲ್ಲಾ ಎಂಬ ನಾನ್ನುಡಿ ಈ ಮುಖ್ಯೋಪಾಧ್ಯಾಯ ರಿಗೆ ಅನ್ವಯವಾಗುತ್ತಿದೆ ಎಂಬಂತಿದೆ.
ರಾಜು ಬಾಗಲಕೋಟಿ