ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಮಘಟ್ಟ ಹಾಗೂ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನಲ್ಲಿ ಕಳೆದ 4_5 ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ,ಉಪನದಿಗಳ 4 ಸೇತುವೆಗಳು ಜಲಾವೃತಗೊಂಡಿವೆ.
ಈ ಬಾರಿಯ ಮಳೆಯ ಅಬ್ಬರ ಜೋರಾಗಿದ್ದು,ಮಳೆಯಿಂದಾಗಿ ಕೃಷಿ ಚಟುವಟಿಕೆಗಳ ಚುರುಕುಗೊಂಡಿವೆ.ಇದು ಸಹಜವಾಗಿ ರೈತಾಪಿ ಜನರಲ್ಲಿ ಸಂತಸ ಮೂಡಿಸಿದೆ.ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನಲ್ಲಿ ಕಳೆದ 4_5 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಪರಿಣಾಮ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಿಗೆ ನೀರಿನ ಮಟ್ಟ ಏರಿಕೆಯಾಗುತ್ತಿದೆ.ಮಲಿಕವಾಡ-ದತ್ತವಾಡ,ಬಾರವಾಡ-ಕುನ್ನೂರ,ಕಾರದಗಾ-ಭೋಜ,ಭೋಜವಾಡಿ-ಹುಣ್ಣರಗಿ ಹೀಗೆ 4 ಸೇತುವೆಗಳು ಜಲಾವೃತಗೊಂಡಿವೆ. ಕ್ಷಣ-ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ.ಇದರಿಂದಾಗಿ ಇನ್ನಷ್ಟು ಸೇತುವೆಗಳ ಜಲಾವೃತ ಆಗುವ ಸಾಧ್ಯತೆಗಳು ಇವೆ.ತಾಲೂಕಾಡಳಿತ ನದಿತೀರದಲ್ಲಿ ತೀವ್ರ ಕಟ್ಟೆಚರವನ್ನು ವಹಿಸಿದೆ.