gokak

ಗೋಕಾಕ: ಕರವೇ ಶಿವರಾಮೇಗೌಡ ಬಣದ ಪದಾಧಿಕಾರಿಗಳ ಆಯ್ಕೆ

Share

ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಗೋಕಾಕ ತಾಲೂಕಿನ ಕಾರ್ಯಕರ್ತರ ಸಭೆ ಹಾಗೂ ವಿವಿಧ ಘಟಕಗಳ ಅಧ್ಯಕ್ಷರ ಆಯ್ಕೆ ತಾಲ್ಲೂಕು ಯುವ ಘಟಕದ ಅಧ್ಯಕ್ಷರು ಹಾಗೂ ತಾಲ್ಲೂಕು ಉಪಾಧ್ಯಕ್ಷ ಸಂಚಾಲಕರ ಆಯ್ಕೆಗಾಗಿ ಇವತ್ತು ಬೆಳಗಾವಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ದೂಪದಾಳ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಯಿತು ಗೋಕಾಕ ತಾಲೂಕಿನ ಯುವ ಘಟಕದ ಅಧ್ಯಕ್ಷರಾಗಿ ರಾಜು ಮುತ್ತೆಣ್ಣವರ ಉಪಾಧ್ಯಕ್ಷರಾಗಿ ರಾಜು ವಗ್ಗಣ್ಣವರ ಸುನೀಲ್ ಬೆಳಮರಡಿ ಸಂಚಾಲರಾಗಿ ಬಸವರಾಜ ನಡಗೇರಿ ಮೀರಾಸಾಬ ಬಳಿಗಾರ ಅಶೋಕ ಗಾಡಿವಡ್ಡರ ಆಯ್ಕೆಯಾದರು.

 

ನವಿಳಮಾಳ ಗ್ರಾಮ ಘಟಕದ ಅದ್ಯಕ್ಷರಾಗಿ ಯಲ್ಲಾಲಿಂಗ ಶಿವನಪ್ಪಗೋಳ ದೂಪದಾಳ ಘಟಕದ ಅಧ್ಯಕ್ಷರಾಗಿ ಗಜಪ್ಪಾ ಗಾಡಿವಡ್ಡರ ಶಿಂದಿಕುರಬೇಟ ಘಟಕಕ್ಕೆ ಸುನೀಲ್ ಬಂಡಿವಡ್ಡರ ಶಂಕರ ಗಾಡಿವಡ್ಡರ ಆಯ್ಕೆಯಾದರು ಸಭೆಯನ್ನು ಉದ್ದೇಶಿಸಿ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ಮಾತನಾಡಿ ಮುಂಬರುವ ದಿನಗಳಲ್ಲಿ ಗೋಕಾಕ ತಾಲೂಕಿನ ಪ್ರತಿ ಹಳ್ಳಿಯಲ್ಲಿ ಕರವೇ ಘಟಕಗಳು ಸ್ಥಾಪನೆ ಮಾಡಬೇಕು ಕರವೇ ಕಾರ್ಯಕರ್ತರು ನಾಡು ನುಡಿ ಸಾಹಿತ್ಯ ಸೇವೆಗೆ ಕಟಿಭದ್ದರಾಗಿ ಕೆಲಸ ಮಾಡಬೇಕು ಎಲ್ಲಾ ಯುವಕರು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಇನ್ನೋರ್ವ ಅತಿಥಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಬ ತೇಲಸಂಗ ಮಾತನಾಡಿ ಕರವೇ ರಾಜ್ಯಾಧ್ಯಕ್ಷರು ಶ್ರೀ ಎಚ್ ಶಿವರಾಮೇಗೌಡರ ಮಾರ್ಗದರ್ಶನ ದಲ್ಲಿ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲಾ ಕರವೇ ಕಾರ್ಯಕರ್ತರು ನಡೆಯಬೇಕು ಅರಸಿಣ ಕುಂಕುಮದ ಸಂಕೇತವಾದ ಕನ್ನಡದ ಶಲ್ಯ ಹಾಕಿಕೊಂಡು ಕಾರ್ಯಕರ್ತರು ಇನ್ನಿತರ ಚಟುವಟಿಕೆ ಮಾಡದೇ ನಾಡು ನುಡಿ ಸೇವೆ ಮಾಡಬೇಕು ಪ್ರತಿ ಜಿಲ್ಲಾ ಪಂಚಾಯತಗೆ ಒಬ್ಬ ಉಪಾಧ್ಯಕ್ಷ ನೇಮಕ ಮಾಡಿ ಕರವೇ ಸಂಘಟನೆ ಬೆಳವಣಿಗೆಗೆ ಸಹಾಯಕರಾಗ ಬೇಕು ಎಂದು ಹೇಳಿದರು.

ಸುಮಾರು ವಿವಿಧ ಗ್ರಾಮಗಳಿಂದ ನೂರಾರು ಕರವೇ ಕಾರ್ಯಕರ್ತರು ಆಗಮಿಸಿದ್ದರು ವೇದಿಕೆಯ ಮೇಲೆ ಕರವೇ ತಾಲ್ಲೂಕು ಅಧ್ಯಕ್ಷ ಶ್ರೀ ಶೆಟ್ಟೆಪ್ಪಾ ಗಾಡಿವಡ್ಡರ ಜಿಲ್ಲಾ ಉಪಾಧ್ಯಕ್ಷ ಅಕ್ಬರ್ ಸಡೇಕರ್ ಸಲೀಮ್ ಕಾಲೇಖಾನ್ ರೈತ ಘಟಕದ ಅಧ್ಯಕ್ಷ ರವಿ ನಾವಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು ರೆಹಮಾನ್ ಮೊಕಾಶಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು ಈ ಸಂಧರ್ಭದಲ್ಲಿ ಕರವೇ ಕಾರ್ಯಕರ್ತರು ನಾಡದೇವಿ ಭುವನೇಶ್ವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮ ಎಚ್ ಶಿವರಾಮೇಗೌಡರಿಗೆ ಜಯಘೋಷ ಹಾಕಿ ಕಾರ್ಯಕ್ರಮ ಮುಕ್ತಾಯಗೊಂಡಿತು

Tags:

error: Content is protected !!