ಪ್ರೀತಿ ಮಾಯೆ ಹುಷಾರು ಕಣ್ಣೀರ್ ಮಾರೋ ಬಜಾರ್ ಎಂಬ ಸಾಂಗ್ ನಾವೆಲ್ಲ ಕೇಳಿದ್ದೇವೆ ಪ್ರೀತಿಗೋಸ್ಕರ ಪ್ರಾಣ ಕೊಟ್ಟಿರೋರು, ಪ್ರಾಣ ತೆಗಿದಿರೋರ್ ಬಗ್ಗೆ ನಾವೆಲ್ಲ ನೋಡಿದ್ದೇವೆ, ಅದೇ ರೀತಿ ಇಲ್ಲೊಬ್ಬ ಪ್ರೀತಿ ವಿಚಾರಕ್ಕೇ ಯಮನ ಮನೆಯ ಬಾಗಿಲನ್ನು ತಟ್ಟಿ ಬಂದಿದ್ದಾನೆ,ಹಾಗಾದ್ರೆ ಯಾರಾತ ಏನು ಆತನ ಲವ್ ಸ್ಟೋರಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮೈತುಂಬಾ ಬಾಸುಂಡೆ ತಿಂದು ನರಳುತ್ತಾ ಮಲಗಿರೋ ಈತನ ಹೆಸರು ವಿನಾಯಕ ಭಂಡಾರಿ ಅಂತಾ ಹುಬ್ಬಳ್ಳಿಯ ರಾಜಗೋಪಾಲ್ ನಗರದ ನಿವಾಸಿ, ಪ್ರತಿಷ್ಠಿತ ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಆಗಿದ್ದ ವಿನಾಯಕ ಕಳೆದ ಮೂರು ವರ್ಷಗಳಿಂದ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ ಆದ್ರೆ ಇಬ್ಬರ ನಡುವೆ ಬಿನ್ನಾಭಿಪ್ರಾಯ ಬಂದು ಬ್ರೇಕ್ ಆಫ್ ಆಗಿ ವಿನಾಯಕ ಬೇರೆ ಮದುವೆ ಮಾಡಿಕೊಂಡಿದ್ದ.
ಇತ್ತ ವಿನಾಯಕನಿಂದ ಬ್ರೇಕ್ ಆಪ್ ಆದ ನಂತರ ಆತನ ಹುಡುಗಿ ಇಂದಿರಾನಗರದ ಪ್ರಥ್ವಿ ಎಂಬಾತನ ಜೊತೆ ಲವ್’ನಲ್ಲಿ ಬಿದ್ದಿದ್ಲು ಹೀಗಾಗಿ ವಿನಾಯಕ ಹಾಗೂ ಪ್ರಥ್ವಿ ನಡುವೆ ವೈಷ್ಯಮ್ಯ ಬೆಳೆದಿತ್ತು,ಹೀಗಾಗಿ ಹಲವರು ಬಾರಿ ಪ್ರಥ್ವಿ ವಿನಾಯಕನಿಗೆ ಫೋನ್ ನಲ್ಲಿಯೇ ಧಮ್ಕಿ ಹಾಕಿದ್ದನಂತೆ, ಮೊನ್ನೆ ರಾತ್ರಿ ಕಮರಿಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನ್ ತಿನ್ನಲು ವಿನಾಯಕ ಬಂದಾಗ ಅಲ್ಲಿ ಪ್ರಥ್ವಿ ಎದುರಾಗಿದ್ದಾನೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಪ್ರಥ್ವಿ ಹಾಗೂ ಆತನ ಸ್ನೇಹಿತರು ವಿನಾಯಕ ಮೇಲೆ ಹಲ್ಲೆ ನಡೆಸಿ ಬೈಕ್ ನಲ್ಲಿ ಹತ್ತಿಸಿಕೊಂಡು ಹೂಗಾರ್ ಪ್ಲಾಟ್’ನಲ್ಲಿನ ಶೆಡ್’ಗೆ ಕರೆದೊಯ್ದು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಪರಿಣಾಮ ವಿನಾಯಕ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ಕುರಿತು ಪ್ರಕರಣ ಕಮರಿಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಪೃಥ್ವಿರಾಜ್ , ನವೀನ , ನಿಖಿಲ್, ಮನೋಜ್ ,ಯಶವಂತ , ಪ್ರಬುಕುಮಾರ ಎಂಬ ಆರೋಪಿಗಳನ್ನ ಬಂಧನ ಮಾಡಿ ಜೈಲಿಗೆ ಅಟ್ಟಿದ್ದು. ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ.
ಒಟ್ಟಿನಲ್ಲಿ ಪ್ರಿಯತಮೆ ಮಾತು ಕೇಳಿದ್ದ ಪೃಥ್ವಿ ಇದೀಗ ಜೈಲು ಸೇರಿದ್ದು. ಪ್ರಿಯತಮೆ ಮಾತು ಕೇಳಿ ಜೀವ ತೆಗೆಯೋ ಹಂತಕ್ಕೆ ಕೈ ಹಾಕಿರೋದು ದುರದೃಷ್ಟಕರ ಸಂಗತಿಯಾಗಿದೆ.