Vijaypura

ಕಡು ಬಡತನದಲ್ಲಿ ಅರಳಿದ ಪ್ರತಿಭೆ: ಸೈಕ್ಲಿಂಗ್ ಸ್ಪರ್ಧೆಯಲ್ಲಿ ಸಾಧನೆ; ರಾಜ್ಯ ಮಟ್ಟದಲ್ಲೂ ಪದಕ ಪಡೆದ ಬಡ ಪ್ರತಿಭೆ, ರೋಡ್ ಸೈಕಲ್ ಗಾಗಿ ಬೇಕಾಗಿದೆ ನೆರವು

Share

ವಿಜಯಪುರ ಜಿಲ್ಲೆ ಸೈಕ್ಲಿಂಗ್ ಕ್ರೀಡೆಗೆ ಫೇಮಸ್ ಆಗಿದೆ. ಅದೇಷ್ಟೋ ಸೈಕ್ಲಿಂಗ್ ಕ್ರೀಡಾಳುಗಳು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದೀಗ 15 ವರ್ಷದ ಬಾಲಕಿ ಸೈಕ್ಲಿಂಗ್ ನಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ಆದ್ರೀಗ ಈ ಬಾಲಕಿಗೆ ಬಡತನ ಅಡ್ಡಿಯಾಗಿದೆ. ಸಹಾಯ ಹಸ್ತಾಕ್ಕಾಗಿ‌ಬಾಲಕಿ‌ ಕುಟುಂಬ ಮನವಿ ಮಾಡುತ್ತಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ಬಳಿಯ ತೊರವಿ ಗ್ರಾಮದಲ್ಲಿ ನೆಲೆಸಿರೋ ಮಲ್ಲಿಕಾರ್ಜುನ ಹಾಗೂ ಭಾಗ್ಯಶ್ರೀ ಮಗಳು ಭೂಮಿಕಾ ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿದ್ದಾಳೆ. ರಾಷ್ಟ್ರ ಮಟ್ಟದಲ್ಲಿ ಸೈಕ್ಲಿಂಗ್ ನಲ್ಲಿ ಭಾಗಿಯಾಗಿದ್ದಾಳೆ. ರಾಜ್ಯ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿ ಪದಕ ಪಡೆದಿದ್ದಾಳೆ. ಆದ್ರೆ ಈ ಬಾಲಕಿ ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್ ವಿಭಾಗದಲ್ಲಿ ಪದಕ ಗೆಲ್ಲುವ ಕನಸ್ಸಿದೆ. ರೋಡ್ ಸೈಕಲ್ ಖರೀದಿಸಿ ಪ್ರಾಕ್ಟೀಸ್ ಮಾಡಬೇಕಾದರೆ ಇವರ ಬಳಿ ಹಣ ಇಲ್ಲ ಕಿತ್ತು ತಿನ್ನುವ ಬಡತನದ ಮಧ್ಯೆ ಬಾಡಗಿ ಮನೆಯಲ್ಲಿ ತಗಡಿನ ಶೆಡ್ ನಲ್ಲಿ ವಾಸವಾಗಿದ್ದಾರೆ. ಭೂಮಿಕಾ ಬೂದಿಹಾಳ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು, ವಿಜಯಪುರ ನಗರದ ಬಂಜಾರ ಶಾಲಾ ವಿದ್ಯಾರ್ಥಿನಿ. ಬಾಲಕಿಯರ ವಸತಿ ನಿಲಯದಲ್ಲಿದ್ದುಕೊಂಡು ಅಲ್ಲಿ ನೀಡುವ ಸೈಕಲ್ ನಲ್ಲಿ ಪ್ರಾಕ್ಟೀಸ್ ಮಾಡಿ ರಾಜ್ಯ ಮಟ್ಟ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡಿದ್ದಾಳೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹಾಗೂ ಸಚಿವ ಶಿವಾನಂದ ಪಾಟೀಲ ಅವರು ನನಗೆ ಸೈಕಲ್ ಖರೀದಿಸಿ ಕೊಟ್ಟರೇ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿ ತೋರಿಸುವೆ ಅಂತಿದ್ದಾಳೆ ಬಾಲಕಿ ಭೂಮಿಕಾ ಬೂದಿಹಾಳ..

ಇನ್ನು ಮಲ್ಲಿಕಾರ್ಜುನ ಹಾಗೂ ಭಾಗ್ಯಶ್ರೀ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗಳ ಸೈಕ್ಲಿಂಗ್ ಕ್ರೀಡೆಗೆ ಪ್ರೋತ್ಸಾಹ ನೀಡಲು 25 ಸಾವಿರ ಬಡ್ಡಿ ರೂಪದಲ್ಲಿ ಸಾಲ ಮಾಡಿ ಸೈಕಲ್ ಕೊಡಿಸಿದ್ದಾರೆ. ಈಗ ರೋಡ್ ಸೈಕಲ್ ಕೊಡಿಸಬೇಕಾದರೆ 5 ರಿಂದ 10 ಲಕ್ಷದವರೆಗೂ ಸೈಕಲ್ ದರ ಇದೆ. ಬಡತನ ಹೀಗಾಗಿ ಪೋಷಕರು ಶಾಲೆ ಅಷ್ಟೇ ಕಲಿ, ನಮ್ಮಿಂದ ಅಷ್ಟೊಂದು ಹಣ ಎಲ್ಲಿಂದ ಬರುತ್ತೆ ನಮ್ಮ ಹಣೆಬರಹದಲ್ಲಿರೋದು ಆಗುತ್ತೆ ಅಂತಿದ್ದಾರೆ. ಆದ್ರೆ ಬಾಲಕಿ ಭೂಮಿಕಾ ನನಗೆ ಸೈಕಲ್ ಕೊಡಿಸಿ ಅಂತಿದ್ದಾಳೆ. ಹೀಗಾಗಿ ಪೋಷಕರು ಕ್ರೀಡಾ ಇಲಾಖೆಗೆ ಮನವಿ ಕೊಟ್ಟಿದ್ದಾರೆ ಆದ್ರೆ ಅಷ್ಟೊಂದು ಮೌಲ್ಯದ ಸೈಕಲ್ ಕೊಡಿಸುವ ಅವಕಾಶ ಇಲ್ಲಂತಿದ್ದಾರೆ. ಹೀಗಾಗಿ ಬಡ ಮಗಳ ಸಾಧನೆ ಮಾಡಲು ಸಚಿವರಾದ ಎಂಬಿ ಪಾಟೀಲ್ ಹಾಗೂ ಶಿವಾನಂದ ಪಾಟೀಲ, ಜನಪ್ರತಿನಿಧಿಗಳು ಸಹಾಯ ಮಾಡಿದರೆ ಅವರ ಹೆಸರು ಹೇಳಿಕೊಂಡು ಜೀವನ ಸಾಗಿಸಿ ಮಗಳ ಸಾಧನೆಗೆ ಅನುಕೂಲ ಆಗುತ್ತೆ ಅಂತ ಪೋಷಕರು ಮನವಿ ಮಾಡಿದ್ದಾರೆ…

ಒಟ್ಟಿನಲ್ಲಿ, ಬಡತನದಲ್ಲಿ ಬೆಳೆದ ಬಾಲಕಿ ಸೈಕ್ಲಿಂಗ್ ನಲ್ಲಿ ಸಾಧಿಸಲು ಹೊರಟಿದ್ದಾಳೆ, ಅವಳ ಸಾಧನೆಗೆ ಬಡತನ ಅಡ್ಡಿಯಾಗಬಾರದು, ಸಚಿವರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೆರವು ನೀಡುವ ಮೂಲಕ ಸೈಕ್ಲಿಂಗ್ ನಲ್ಲಿ ಬಾಲಕಿ ಸಾಧನೆ ಮಾಡಲು ಪ್ರೇರಣೆ ನೀಡಬೇಕಾಗಿದೆ…

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…

Tags:

error: Content is protected !!