BELAGAVI

ಬೆಳಗಾವಿಯ ಶ್ರೀ ಮಹಾತ್ಮಾಗಾಂಧಿ ರಾಮತೀರ್ಥ ನಗರ ರಹವಾಸಿಗಳ ಸಂಘದ “ಸರ್ವಸಾಧಾರಣ ಸಭೆ

Share

ಬೆಳಗಾವಿ:ಬೆಳಗಾವಿಯ ಶ್ರೀ ಮಹಾತ್ಮಾ ಗಾಂಧಿ ರಾಮತೀರ್ಥ ನಗರ ರಹವಾಸಿಗಳ ಸಂಘದ “ಸರ್ವಸಾಧಾರಣ ಸಭೆ” ನಡೆಯಿತು.

ಸಂಘದ ಅಧ್ಯಕ್ಷರಾದ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ ಮಾತನಾಡಿ ರಾಮತೀರ್ಥನಗರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಗರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೈಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಕೇಳಿದರು. ನಗರಸೇವಕ ಹಣಮಂತ ಕೊಂಗಾಲಿ ಮಾತನಾಡಿ, ಬಡಾವಣೆ 27 ವರ್ಷಗಳಷ್ಟು ಹಳೆಯದಾಗಿರುವ ಬಡಾವಣೆಯಾಗಿದೆ. ಹೊಸ ರಸ್ತೆ ಕಾಮಗಾರಿಗಳು , ಚರಂಡಿ, ಉದ್ಯಾನ್ , ವಿದ್ಯುತ್ ಕಂಬಗಳ ಅಳವಡಿಕೆ, ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆ, 24 ಗಂಟೆ ನೀರು ಸರಬರಾಜು ಪೈಪಲೈನ್ ಅಳವಡಿಕೆ ಬಗ್ಗೆ ಸರ್ವೆ ಆರಂಭಿಸಲಾಗಿದೆ ಎಂದರು. ಈ ಬಾರಿ ಬೇಸಿಗೆಯಲ್ಲಿ ನಾಲ್ಕು ಐದು ಮತ್ತುಆರು ದಿನಗಳ ಒಳಗಾಗಿ ನೀರು ಸರಬರಾಜು ಮಾಡಲಾಗಿದೆ ಎಂದರು. ಇ-ಖಾತಾ ಸಮಸ್ಯೆಯನ್ನು ನೀಗಿಸಲಾಗುತ್ತಿದೆ ಎಂದರು.

Tags:

error: Content is protected !!