Bagalkot

ಮುಂಬೈ ಮೂಲದ ಕಂಪನಿಯಿಂದ ಬಾಗಲಕೋಟೆ ಜಿಲ್ಲೆಯ ರೈತರಿಗೆ 2.84 ಕೋಟಿಗೂ ಅಧಿಕ ಹಣ ಧೋಖಾ…!!!

Share

ಮುಂಬೈ ಮೂಲದ ಕಂಪನಿಯಿಂದ ಬಾಗಲಕೋಟೆ ಜಿಲ್ಲೆಯ ರೈತರಿಗೆ 2.84 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಆನಲೈನ್ ನಲ್ಲಿ ಕಂಪನಿ ವಿಡಿಯೋ ನೋಡಿ ಸಂಪರ್ಕ ಮಾಡಿದ್ದ ಜಮಖಂಡಿ ತಾಲೂಕಿನ 18 ಜನ ರೈತರಿಗೆ ಮೋಸ ಮಾಡಲಾಗಿದೆ. ಮಹಾರಾಷ್ಟ್ರದ ಮುಂಬೈ ಮೂಲದ ಎಎಸ್ ಅಗ್ರಿ & ಅಕ್ವಾ ಎಲ್.ಎಲ್.ಪಿ ಕಂಪನಿ ಪಾಲಿ ಹೌಸ್ ಹೆಸರಲ್ಲಿ ದೇಶಾದ್ಯಂತ ಅನ್ನದಾತರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದು, ರಾಜ್ಯದ ಬಾಗಲಕೋಟೆ, ಬೆಳಗಾವಿ, ವಿಜಯಪುರ ಸೇರಿದಂತೆ ವರ್ಟಿಕಲ್ ಫಾರ್ಮಿಂಗ್ ಹೆಸರಲ್ಲಿ 18 ಜನ ರೈತರಿಗೆ ಬರೋಬ್ಬರಿ 2.84 ಕೋಟಿಗೂ ಅಧಿಕ ಹಣ ವಂಚನೆ ಮಾಡಲಾಗಿದೆ. ೧೦ ಗುಂಟೆ ಭೂಮಿ ಪಾಲಿಹೌಸ್ ನಿರ್ಮಾಣಕ್ಕೆ 50 ಲಕ್ಷ ಖರ್ಚು ಬರುತ್ತೆ. ಅದರಲ್ಲಿ ಅರಿಶಿನ ಬೆಳೆಗೆ 1 ಕೋಟಿ ಆದಾಯ ಬರುತ್ತೆ.

ಆದಾಯದಲ್ಲಿ ಶೇ.50 ರಷ್ಟು ಹಣ ರೈತರಿಗೆ , ಶೇ.50ರಷ್ಟು ಕಂಪನಿಗೆ ಎಂದು ನಂಬಿಸಲಾಗಿದೆ. 2022-23ನೇ ಸಾಲಿನಲ್ಲಿ 2.84 ಕೋಟಿ ಹಣವನ್ನು 18 ಜನ ಜಮಖಂಡಿ ರೈತರು ಕಟ್ಟಿದ್ದರು. ಆದರೇ ಕಂಪನಿಯೂ ಹೇಳಿದಂತೆ ರೈತರಿಗೆ ಪಾಲಿಹೌಸ್ ನಿರ್ಮಾಣ ಮಾಡಿ ಕೊಡದೇ ಮೋಸ ಮಾಡಿದೆ. ಈ ಹಿನ್ನೆಲೆ ಜಮಖಂಡಿ ರೈತರು ಪೋಲಿಸ ಠಾಣೆಯಲ್ಲಿ ಪ್ರಕರಣ ದೂರು ದಾಖಲಿಸಿದ್ದಾರೆ. ನಂತರ ಪ್ರಕರಣವನ್ನು ಬಾಗಲಕೋಟೆ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಕಂಪನಿಯಿಂದ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 10 ರಿಂದ 11 ರಾಜ್ಯಗಳಲ್ಲಿ ವಂಚನೆ ಪ್ರಕರಣಗಳು ದಾಖಲು ಮಾಡಲಾಗಿದೆ. ಸದ್ಯ ಜಮಖಂಡಿ ರೈತರ ದೋಖಾ ಕೇಸ್ ನಲ್ಲಿ 26 ಜನರ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ನೇತೃತ್ವದಲ್ಲಿ ಮುಂದುವರೆದ ವಿಚಾರಣೆ ಮುಂದುವರೆದಿದೆ.

Tags:

error: Content is protected !!