ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ಹೊಸ ಚಿತ್ರ ‘ದೂರ ತೀರ ಯಾನ’ ಈಗ ವಿದ್ಯಾಕಾಶಿ ಧಾರವಾಡದಲ್ಲಿ ಪ್ರಿಮಿಯರ್ ಶೋ ಆಗುತ್ತಿದೆ.
ಹೌದು ಈ ಕುರಿತು ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಸೋರೆ, ಡಿ. ಕ್ರಿಯೇಷನ್ ಅಡಿಯಲ್ಲಿ ದೇವರಾಜ್ ಆರ್. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇಡೀ ಸಿನಿಮಾ ಒಂದು ಜರ್ನಿ ಆಧರಿಸಿ ಇದೆ. ಪ್ರೇಮಿಗಳ ಮಧ್ಯೆಯೂ ಸಾಮಾಜಿಕ ಬದ್ಧತೆ ಹೇಗಿರಬೇಕು. ಪ್ರೀತಿ ಎಂದರೆ ನಿಜವಾಗಿಯೂ ಏನೂ ಅನ್ನೋದನ್ನು ಇಂದಿನ ಪೀಳಿಗೆಗೆ ತಿಳಿಸಲು ಈ ಸಿನಿಮಾ ಮಾಡಿದ್ದೇವೆ. ಸಿನಿಮಾ ಇದೇ ಜುಲೈ 11ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಪೂರ್ವದಲ್ಲಿ ಪ್ರಿಮಿಯರ್ ಶೋ ಧಾರವಾಡದಲ್ಲಿ ಜುಲೈ 9ರಂದು ಸಂಜೆ 4ಕ್ಕೆ ನಡೆಯಲಿದೆ ಎಂದರು. ಜತೆಗೆ ಪ್ರೇಕ್ಷಕರನ್ನೇ ಸೆಲೆಬ್ರಿಟಿಯನ್ನಾಗಿ ಕರೆಯಸಲಿದ್ದು ,ಇದಕ್ಕಾಗಿ ವಿಶೇಷವಾಗಿ ಉಚಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡುತ್ತಿದ್ದೇವೆ. ನಗರದ ಪ್ರಮುಖ ಸ್ಥಳಗಳಲ್ಲಿ ಕ್ಯೂ ಆರ್ ಕೋಡ್ ಸಮೇತ ಬ್ಯಾನರ್ ಹಾಗೂ ಅಲ್ಲಲ್ಲಿ ಸ್ಟಿಕ್ಕರ್ ಹಾಕುತ್ತೇವೆ.
ಅದರಲ್ಲಿನ ಕ್ಯೂ ಆರ್ ಕೋಡ್ ಮೊಬೈಲ್ನಲ್ಲಿ ಸ್ಕ್ಯಾನ್ ಮಾಡಿದ್ರೆ, ಒಬ್ಬರು ಮೂರು ಟಿಕೆಟ್ ಬುಕ್ ಮಾಡಬಹುದು. ಬಳಿಕ ಶೋ ದಿನ ಅವರಿಗೆ ಉಚಿತ ಪಾಸ್ ನೀಡುತ್ತೇವೆ. ಈ ರೀತಿಯ ಬುಕ್ಕಿಂಗ್ ವ್ಯವಸ್ಥೆ ಮಾಡಿರೋದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು ಎಂದು ಮಂಸೋರೆ ತಿಳಿಸಿದರು. ಇನ್ನೂ ಚಿತ್ರದಲ್ಲಿ ವಿಜಯ ಕೃಷ್ಣ ಮತ್ತು ಪ್ರಿಯಂಕಾ ಪ್ರಮುಖ ಪಾತ್ರದಲ್ಲಿದ್ದಾರೆ. ಬೆಂಗಳೂರಿನಿಂದ ಆರಂಭಗೊಳ್ಳುವ ಸಿನಿಮಾ, ಕರಾವಳಿ, ಉತ್ತರ ಕರ್ನಾಟಕ, ದಾಂಡೇಲಿ ಮೂಲಕ ಗೋವಾಗದಲ್ಲಿ ಅಂತ್ಯವಾಗುತ್ತದೆ. ಇಡೀ ಸಿನಿಮಾ ಪ್ರೇಕ್ಷಕರಿಗೆ ಒಂದು ಜರ್ನಿಯ ಅನುಭವ ನೀಡಲಿದೆ ಎಂದು ಮಂಸೋರೆ ಮಾಹಿತಿ ನೀಡಿದರು.