Khanapur

ನೀರು ತುಂಬಿದ ಸೇತುವೆ ಮೇಲೆ ಕಿಡಿಗೇಡಿಗಳಿಂದ ವಾಹನ ಚಾಲನೆ

Share

ಖಾನಾಪುರ: ಹೆಮ್ಮಡಗಾ- ಅನಮೋಡ್ ರಸ್ತೆಯ ಮಂತುರ್ಗಾ ಬಳಿಯ ಹಾಲಾತ್ರಿ ಸೇತುವೆಗೆ ನೀರು ನುಗ್ಗಿರುವುದರಿಂದ ಸೇತುವೆ ಸಂಚಾರವನ್ನ ನಿಷೇದಿಸಲಾಗಿದೆ ಆದರೆ ಕೆಲವು ಚಾಲಕರು ಈ ಸೇತುವೆಯ ಮೇಲೆ ತಮ್ಮ ಕಾರುಗಳನ್ನು ಚಲಾಯಿಸುವ ಮೂಲಕ ತಮ್ಮ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದು ಇದರ ಬಗ್ಗೆ ಪೊಲೀಸ್ ಹಾಗೂ ತಾಲೂಕಾ ಆಡಳಿತ ಗಮನ ಹರಿಸಿ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ಸಂಪೂರ್ಣ ನಿಷೇದಿಸಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ.

ಬುಧವಾರ ಥಾರ್ ಚಾಲಕನೊಬ್ಬ ನೀರು ತುಂಬಿದ ಹಾಲಾತ್ರಿ ಸೇತುವೆ ಮೇಲೆ ವಾಹನ ಚಲಾಯಿಸಿಕೊಂಡು ಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಥಾರ್ ಚಾಲಕ ತನ್ನ ಪ್ರಾಣದ ಜೊತೆ ಚೆಲ್ಲಾಟ ಆಡಿ ತುಂಬಿದ ಸೇತುವೆ ಮೇಲೆ ವಾಹನ ಚಲಾಯಿಸಿಕೊಂಡು ಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಸಂಭವಿಸಿಲ್ಲ ಕಳೆದ ವರ್ಷ ಕೂಡ ಬೆಳಗಾವಿಯ, ಶಹಾಪುರ ನಿವಾಸಿ ದ್ವಿಚಕ್ರ ವಾಹನದ ಸವಾರ ಹಾಲತ್ರಿ ಸೇತುವೆ ದಾಟುವಾಗ ದ್ವಿಚಕ್ರ ವಾಹನದ ಜೋತೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅವನು ಮರದ ಕೊಂಬೆಯನ್ನು ಹಿಡಿದು ಮೇಲೆ ಹತ್ತಿದ್ದ ಘಟನೆ ನಡೆದಿತ್ತು.
ಆದ್ದರಿಂದ ತಾಲೂಕಾ ಆಡಳಿತ ಹಾಗೂ, ಪೊಲೀಸ್ ಇಲಾಖೆ ಈ ವಿಷಯದ ಬಗ್ಗೆ ಗಮನ ಹರಿಸಬೇಕು ಮತ್ತು ಈ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸುವ ಮೂಲಕ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಬೇಕು ಅಥವಾ ಇತರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವದು ಸಾರ್ವಜನಿಕರ ಆಗ್ರಹವಾಗಿದೆ.

Tags:

error: Content is protected !!