ಕಳೆದ 2016 ಜೂನ್ 15 ರಂದು ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶಗೌಡ ಅಣ್ಣನ ಹೆಸರಿನ ತನ್ನ ಮಾಲೀಕತ್ವದ ಉದಯ ಜೀಮ ಮುಂದೆ ಬೆಳ್ಳಂಬೆಳಗ್ಗೆ ಹತ್ಯೆಯಾದ ಪ್ರಕರಣದಲ್ಲಿ, ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಹಿಂದೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ ಈಗ ಅದೇ ಜಾಮೀನು ರದ್ದು ಮಾಡಿದ್ದು ನಮ್ಮ ತಮ್ಮನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗುರುನಾಥಗೌಡ ಆಗ್ರಹಿಸಿದ್ದಾರೆ.
ವಿನಯ ಕುಲಕರ್ಣಿ ಜಾಮೀನು ರದ್ದು ಹಿನ್ನಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, 9 ವರ್ಷದ ಹಿಂದೆ ನಮ್ಮ ಸೋದರನ ಹತ್ಯೆ ಆಗಿತ್ತು. 9 ವರ್ಷದಿಂದ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಈ ಹಿಂದೆಯೇ ಜಾಮೀನು ಕೊಡದಂತೆ ಕೇಳಿದ್ದೆವು. ಆಗ ಸುಪ್ರಿಂ ಕೋರ್ಟ್ ಜಾಮೀನು ಕೊಟ್ಟಿತ್ತು. ನಾವು ಇತ್ತೀಚೆಗೆ ಜಾಮೀನು ರದ್ಧತಿಗೆ ಕೇಳಿದ್ದೆವು. ಈಗ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ. ಸಿಬಿಐನವರು ಸುಪ್ರೀಂಕೋರ್ಟ್ ಹೋಗಿದ್ರು, ಸರಿಯಾದ ದಾಖಲೆಗಳನ್ನು ಸಿಬಿಐ ಕೊಟ್ಟಿತ್ತು. ಹೀಗಾಗಿ ಜಾಮೀನು ರದ್ದು ಆಗಿದೆ. ಎಲ್ಲ ಸಾಕ್ಷಿಗಳು ಸತ್ಯಹೇಳಬೇಕು. ಯಾರೂ ಹೆದರಬಾರದು. ನಮ್ಮ ತಮ್ಮನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೇಳಿಕೊಂಡರು.
