Dharwad

ಧಾರವಾಡ ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು. ಧಾರವಾಡ ಜಿಲ್ಲೆ ನವಲಗುಂದ ತಾ. ಹೆಬಸೂರ ಗ್ರಾಮದ ಹೊರವಲಯದಲ್ಲಿ ಘಟನೆ.

Share

ಧಾರವಾಡ ಅಪರ ಜಿಲ್ಲಾಧಿಕಾರಿ ಚಲುಸುತ್ತಿದ್ದ ಇನ್ನೋವಾ ಕಾರು ಅಪಘಾತವಾಗಿ ಅದೃಷ್ಟವಶಾತ್ ಅಪರ ಜಿಲ್ಲಾಧಿಕಾರಿಯವರು ಅವರು ಪ್ರಾಣಾಪಾಯದಿಂದ ಪಾರಾಗಿ ಅನಾಹುತವೊಂದು ತಪ್ಪಿದ ಘಟನೆ ಇಂದು ನವಲಗುಂದ ರಸ್ತೆಯ ಹೆಬಸೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

ವೈ- ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸುಮಾರು 10 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಚಿವ ಸಂತೋಷ ಲಾಡ ಅವರ ಜೊತೆ ಅಪ್ಪರ ಜಿಲ್ಲಾಧಿಕಾರಿ ಗೀತಾ ಅವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ವೇಳೆ ಈ ದುರ್ಘಟನೆ ನಡೆದಿದೆ.‌ ನವಲಗುಂದಿದ ಮಳೆ ಹಾನಿ‌ ಪ್ರದೇಶ ಭೇಟಿ ಬಳಿಕ ಧಾರವಾಡಕ್ಕೆ ಹೆಬಸೂರ ಮಾರ್ಗವಾಗಿ ಹಿಂದಿರುಗುತ್ತಿದ್ದರು. ಈ ವೇಳೆ ಇನ್ನೋವಾ ಕಾರು ಮತ್ತು ಗ‌್ಯಾಸ್ ಟ‌್ಯಾಂಕರ್ ಮಧ್ಯ ಅಪಘಾತವಾಗಿದೆ. ಡಿಕ್ಕಿ ರಭಸಕ್ಕೆ ಇನೋವಾ ಕಾರಿ ಮುಂಭಾಗಕ್ಕೆ ಹಾನಿಯಾಗಿದೆ.‌ ಸ್ಥಳಕ್ಕೆ ನವಲಗುಂದ ಪೋಲಿಸರು ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಇನ್ನು ಬಳಿಕ ಅಪರ ಜಿಲ್ಲಾಧಿಕಾರಿ ಗೀತಾ ಅವರನ್ನು ಬೇರೆ ವಾಹನದಲ್ಲಿ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ. ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ..

Tags:

error: Content is protected !!