Chikkodi

ತಗ್ಗಿದ ಮಳೆ,ನೀರಿನಮಟ್ಟದಲ್ಲಿ ಯಥಾಸ್ಥಿತಿ

Share

ಚಿಕ್ಕೋಡಿ:ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಗಡಿ ಭಾಗದ ಚಿಕ್ಕೋಡಿ-ನಿಪ್ಪಾಣಿ ತಾಲೂಕಿನಲ್ಲಿ ಮಳೆ ಕ್ಷೀಣಿಸಿದ್ದರಿಂದ ಕೃಷ್ಣಾ, ದೂಧಗಂಗಾ ನದಿ ಸೇರಿದಂತೆ ಉಪ ನದಿಗಳ ನೀರಿನ ಮಟ್ಟ ಯಥಾಸ್ಥಿತಿ ಕಾಯ್ದುಕೊಂಡಿವೆ.

ವೇದಗಂಗಾ ನದಿಯ ಜತ್ರಾಟ-ಭಿವಸಿ,
ಅಕ್ಕೊಳ-ಸಿದ್ದಾಳ, ಬಾರವಾಡ-ಕುನ್ನೂರ,
ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ
ಕಾರದಗಾ-ಭೋಜ, ಮಲಿಕವಾಡ-ದತ್ತವಾಡ,
ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು
ಮಾಂಜರಿ-ಸವದತ್ತಿ ಬ್ಯಾರೇಜ್ ಹೀಗೆ ಒಟ್ಟು 8
ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಇಂದಿಗೂ ಸ್ಥಗಿತಗೊಂಡಿದೆ.

ಬೇಡಕಿಹಾಳ-ಬೋರಗಾಂವ, ಸದಲಗಾ-ಬೋರಗಾಂವ, ಯಕ್ಸಂಬಾ-ದಾನವಾಡ ಹಾಗೂ ಯಮಗರ್ಣಿ-ಸೌಂದಲಗಾ ಸೇತುವೆಗಳ ಮುಖಾಂತರ ಸಂಚಾರ ಸುಗಮವಾಗಿ ಸಾಗಿದೆ. ಗಡಿಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ 1,00,265 ಕ್ಯೂಸೆಕ್ ನೀರು ಹರಿದು ಬರುತ್ತಿದೆ.ನಿನ್ನೆಗಿಂತ ಇವತ್ತು ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದ್ದು,ನಾಳೆಯಿಂದ ಪ್ರವಾಹದ ಮಟ್ಟ ಇಳಿಮುಖವಾಗುವ ಸಾಧ್ಯತೆ ಇದೆ

Tags:

error: Content is protected !!