Bagalkot

ಬಾಗಲಕೋಟೆ : ಸರ್ಕಾರಿ ಯೋಜನೆ ಅನುಷ್ಠಾನ ಮಾಡದ ಅಧಿಕಾರಿ ವಿರುದ್ಧ ಡಿಸಿ ಗರಂ,ನೋಟಿಸ್ ಜಾರಿ.

Share

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಗೊಳಿಸದೆ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಲೋಕಾಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಜ್ಯೋತಿ ಉಪ್ಪಾರಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ

ಲೋಕಾಪುರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರಗೆ ನೋಟಿಸ ನೀಡಲಾಗಿದ್ದು, ನೋಟಿಸ್‌ಗೆ ಲಿಖಿತ ಉತ್ತರ ನೀಡುವಂತೆ 15 ದಿನಗಳ ಗಡುವು ನೀಡಲಾಗಿದ್ದು,
ಸಮರ್ಪಕ ಉತ್ತರ ನೀಡದೇ ಇದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳೋದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ


ಸರ್ಕಾರಿ ಮಹತ್ವಾಂಕ್ಷಿ ಯೋಜನೆ ಯಶಸ್ವಿಗೊಳಿಸದೇ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ್‌ಗೆ ನೋಟಿಸ್ ನೀಡಲಾಗಿದೆ ಲೋಕಾಪುರ ಪಟ್ಟಣದಲ್ಲಿ ನಿಗದಿತ ಸಮಯದಲ್ಲಿ ಆರಂಭವಾಗದ ಇಂದಿರಾ ಕ್ಯಾಂಟಿನ್ ಪಟ್ಟಣದಲ್ಲಿ ಡಿಎಂಎಫ್ ಮತ್ತು ಎಸ್ ಸಿಪಿ ಯೋಜನೆ ಅಡಿ ನಿರ್ಮಾಣವಾದ ವಾಣಿಜ್ಯ ಮಳಿಗೆ ಹಂಚಿಕೆ ವಿಳಂಬ
15ನೇ ಹಣಕಾಸು ಯೋಜನೆಯ ಅನುದಾನ ಸಮರ್ಪಕ ಬಳಸಿಕೊಳ್ಳದಿರುವುದು.
ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ, ಕಾಮಗಾರಿ ಸರಿಯಾಗಿ ನಿರ್ವಹಿಸದಿರೋದು
ಮುಖ್ಯಾಧಿಕಾರಿ ಪ್ರತಿ ಮಾಹೆ ದಿನಚರಿ ಸಲ್ಲಿಸದೆ ದುರ್ವರ್ತನೆ ತೋರಿದ್ದು ಸೇರಿದಂತೆ ಇನ್ನಿತರೆ ಕರ್ತವ್ಯಲೋಪಗಳನ್ನು ಎಸಗಿದ್ದು, ರಾಜ್ಯ ನಾಗರಿಕ ಸೇವಾ ನಿಯಮ 2021ರ ನಿಯಮ 3(1)(I)ಸಂಪೂರ್ಣ ಉಲ್ಲಂಘಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಗರಂ ಆಗಿರುವ ಜಿಲ್ಲಾಧಿಕಾರಿ ಪ.ಪಂ.ಮುಖ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಅಷ್ಟೇ ಅಲ್ಲದೆ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಬೇಜವಾಬ್ದಾರಿ, ದುರ್ವರ್ತನೆಯಿಂದ ಲೋಕಾಪೂರ ಸಾರ್ವಜನಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!