Vijaypura

ಅಪ್ಪಾ ಮಗಾ ಇಬ್ಬರು ಕೊವಿಡ್ ನಲ್ಲಿ ಭ್ರಷ್ಟಾಚಾರ ಮಾಡಿದ ಹಣದಿಂದ ನನ್ನನ್ನು ಪಕ್ಷದಿಂದ ಹೊರ ಹಾಕಿಸಿದರು: ಶಾಸಕ ಯತ್ನಾಳ ಕಿಡಿ

Share

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಕಿಡಿಕಾರಿದ್ದಾರೆ. ವಿಜಯಪುರ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಸಾವಿರಾರು ಕೋಟಿ ಹಣದಿಂದ ನಮ್ಮನ್ನು ತುಳಿಯುತ್ತಿದ್ದಾರೆ ಎಂದು ಮತ್ತೇ ಅಪ್ಪ ಮಗನ ವಿರುದ್ಧ ಶಾಸಕ ಯತ್ನಾಳ ಕಿಡಿಕಾರಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ. 15% ಭ್ರಷ್ಟಾಚಾರವನ್ನು ಅಪ್ಪಾಜಿ (ಯಡಿಯೂರಪ್ಪ) ಅವರ ಮಗ ವಿಜಯೇಂದ್ರ ತೆಗೆದುಕೊಂಡಿದ್ದಾರೆ.

ಭ್ರಷ್ಟಾಚಾರ ಮಾಡಿದವರಿಂದ ನನ್ನನ್ನು ಪಕ್ಷದಿಂದ ಹೊರ ಹಾಕಿಸಿದರು, ನಾನೇನು ಭ್ರಷ್ಟಾಚಾರ ಮಾಡಿಲ್ಲಾ ಎಂದರು. ವಿಜಯೇಂದ್ರ ರಾಜ್ಯಾಧ್ಯಕ್ಷ ಆದ್ಮೇಲೆ ಬಿಜೆಪಿಯ ಹೋರಾಟಗಳು ವಿಫಲ ಆಗಿದ್ದಾವೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ವಿಕ್ ಆಗಿದೆ, ಕರ್ನಾಟಕದಲ್ಲಿ ಬಿಜೆಪಿ ಬದಲಾವಣೆ ಆಗಬೇಕಿದೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಇನ್ನೂ ಕೇಂದ್ರ ಸಚಿವ ವಿ.ಸೋಮಣ್ಣಾ ರಾಜಾದ್ಯಕ್ಷ ಹುದ್ದೆ ಪರೋಕ್ಷವಾಗಿ ನಕಾರ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಸಚಿವ ವಿ. ಸೋಮಣ್ಣ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮಂತ್ರಿಯಾಗಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ,

ಆದ್ರೇ, ಯಾವ ಕಾರಣಕ್ಕೆ ರಾಜ್ಯಾಧ್ಯಕ್ಷ ಆಕಾಂಕ್ಷಿ ಅಂದಿದ್ದು ನನಗೆ ಗೊತ್ತಿಲ್ಲಾ ಎಂದರು. ಇನ್ನೂ ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಹಾಗೂ ವಿಜಯೇಂದ್ರ ಕುರಿತು ಸಾಪ್ಟ್ ಕಾರ್ನರ್ ಹೊಂದುತ್ತಿರುವ ಮಾಜಿ ಡಿಸಿಎಂ ಕೆ. ಎಸ್.ಈಶ್ವರಪ್ಪ ಕುರಿತು ಪ್ರತಿಕ್ರಿಯಿಸಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನೆಲೆ ನನಗೆ ಗೊತ್ತಿಲ್ಲಾ, ಈಶ್ಚರಪ್ಪ ಬಿಜೆಪಿಗೆ ಕರೆದುಕೊಳ್ಳುವಂತೆ ಕುರುಬ ಸಮಾಜದ ಒತ್ತಾಯ ಹಿನ್ನೆಲೆ ಮಾತನಾಡಿದ್ದಾರೆ. ಈಶ್ವರಪ್ಪ ಯಾವಾಗ ವಿಜಯೇಂದ್ರ ಬಗ್ಗೆ ಪರ ಹಾಗೂ ವಿರುದ್ಧ ಮಾತನಾಡುತ್ತಾರೆ ಗೊತ್ತಿಲ್ಲಾ, ಅವರ ನೆಲಿ ಗೊತ್ತಾಗುತ್ತಿಲ್ಲಾ ಎಂದರು. ಆದ್ರೇ, ಈಶ್ವರಪ್ಪ ಮಗನಿಗೆ ಟಿಕೆಟ್ ಕೇಳಿದ್ರೇ ಕುಟುಂಬ ರಾಜಕಾರಣ ಅಂತಾರೆ. ಯಡಿಯೂರಪ್ಪ ಮಾಡಿದ್ರೇ ಸೈಕಲ್ ತುಳಿದು ಪಾರ್ಟಿ ಕಟ್ಟಿದ್ದಾರೆ ಅಂತಾರೆ, ಅದಕ್ಕಾಗಿ ಈಶ್ವರಪ್ಪರನ್ನು ಸುಮ್ಮನೆ ಪಕ್ಷದಿಂದ ಉಚ್ಚಾಟನೆ ಮಾಡಿದ್ರು ಎಂದು ಈಶ್ವರಪ್ಪ ಪರ ಯತ್ನಾಳ ಬ್ಯಾಟಿಂಗ್ ನಡೆಸಿದರು.

 

Tags:

error: Content is protected !!