Bagalkot

ಕಾರು ವ್ಯವಹಾರದ ಹಣಕ್ಕೆ ಸ್ನೇಹಿತನನ್ನೇ ಕೊಂದ ದುಷ್ಕರ್ಮಿ!!!

Share

ಕಾರು ಮಾರಾಟದ ಹಣಕ್ಕಾಗಿ ಗುದ್ದಲಿಯಿಂದ ಹೊಡೆದು ಸ್ನೇಹಿತನನ್ನೇ ಕೊಲೆಗೈದ ಘಟನೆ ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಕಾರು ವ್ಯವಹಾರದ ಹಣಕಾಸು ಜಗಳಕ್ಕೆ ಸ್ನೇಹಿತನ ಹತ್ಯೆಯಾಗಿರುವ ಘಟನೆ ಸಂಭವಿಸಿದೆ. ಕುಡಿದ ಮತ್ತಲ್ಲಿ ಜಗಳ ನಡೆದಿದ್ದು, ಚಿನ್ನಪ್ಪ ಬೆಣ್ಣೂರು ಎಂಬಾತನು ಮಾಲತೇಶ್ ದಾಸಪ್ಪನವರ (32) ಎಂಬ ತನ್ನ ಸ್ನೇಹಿತನನ್ನು ಗುದ್ದಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಕಾರು ಮಾರಾಟದ ಹಣವನ್ನು ಮಾಲತೇಶ್‌ಗೆ ಕೊಟ್ಟಿರಲಿಲ್ಲ ಎಂಬುದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:

error: Content is protected !!