BELAGAVI

ಬಸವ ಕಾಯಕ ಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವ ದಳದ ವತಿಯಿಂದ ರಕ್ತದಾನ ಶಿಬಿರ

Share

ಬಸವ ಕಾಯಕ ಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವ ದಳದ ವತಿಯಿಂದ ಪ್ರತಿವರ್ಷದಂತೆ ವಚನ ಪಿತಾಮಹರಾದ ಲಿಂಗೈಕ್ಯ ಡಾ. ಫ.ಗು ಹಳಕಟ್ಟಿ ಮತ್ತು ಲಿಂಗಾನಂದ ಜಗದ್ಗುರುಗಳ ಸಂಸ್ಮರಣೆಯ ನಿಮಿತ್ಯ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ: ಅಶೋಕ ಬೆಂಡಿಗೇರಿ , ಉಪಾಧ್ಯಕ್ಷ: ಎಸ್.ಎಸ್. ಪಾಟೀಲ, ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ: ಸೂರ್ಯಕಾಂತ ಭಾವಿ ಅವರ ನೇತೃತ್ವದಲ್ಲಿ ವಚನ ಪಿತಾಮಹರಾದ ಲಿಂಗೈಕ್ಯ ಡಾ. ಫ.ಗು ಹಳಕಟ್ಟಿ ಮತ್ತು ಲಿಂಗಾನಂದ ಜಗದ್ಗುರುಗಳ ಸಂಸ್ಮರಣೆಯ ನಿಮಿತ್ಯ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಹಲವಾರು ಜನರು ಸ್ವಯಂಪ್ರೇರಣೆಯಿಂದ ರಕ್ತದಾನವನ್ನು ಮಾಡಿದರು.

ಈ ಕುರಿತು ಮಾಹಿತಿಯನ್ನು ನೀಡಿದ, ಆನಂದ ಗುಡಸ ಅವರು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸಹಾಯವಾಗಲಿ ಮತ್ತು ಜನರಲ್ಲಿ ರಕ್ತದಾನದ ಜಾಗೃತಿಯಾಗಲಿ ಎಂಬ ಉದ್ಧೇಶದಿಂದ ಪ್ರತಿವರ್ಷ ರಕ್ತದಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 100 ಬಾಟಲ್’ಗಳಷ್ಟು ರಕ್ತವನ್ನು ಸಂಗ್ರಹಿಸಿ ಕೆ.ಎಲ್.ಇ ಆಸ್ಪತ್ರೆಯ ರಕ್ತಭಂಡಾರಕ್ಕೆ ಕಳುಹಿಸಲಾಗುತ್ತದೆ. ಇದು 5 ವರ್ಷವಾಗಿದೆ. ಅಲ್ಲದೇ 57 ಜನರು ದೇಹದಾನಕ್ಕೂ ವಾಗ್ಧಾನವನ್ನು ಮಾಡಿದ್ದಾರೆ. ನೇತ್ರದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜೀಕ ಉಪಕ್ರಮಗಳನ್ನು ಮಾಡುತ್ತಿದೆ ಎಂದರು.

ಬಸವ ಕಾಯಕ ಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವ ದಳ ಜಾತಿ ಮತಧರ್ಮದ ಬೇಧಭಾವವಿಲ್ಲದೇ, ಹಲವಾರು ಸಾಮಾಜೀಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ ಅತ್ಯಾಧುನಿಕ ಶವವಾಹಕವನ್ನು ಕೂಡ ಸಮಾಜಕ್ಕೆ ನೀಡಿದೆ ಎಂದು ಶಂಕರ್ ಗುಡಸ್ ಹೇಳಿದರು. ಬೈಟ್
ಈ ಸಂದರ್ಭದಲ್ಲಿ ಮುರುಗೇಂದ್ರ ಗೌಡ ಪಾಟೀಲ, ಕೆ. ಶರಣ ಪ್ರಸಾದ್ ಮಲ್ಲಿಕಾರ್ಜುನ ಆಡಿನ, ಮಹಾಂತೇಶ್ ಗುಡಸ್, ವೀರೇಶ್ಉಳವಿ, ನಿತಿನ್ ಗುಡಸ್,ಶಿವಲಿಂಗ ದಿವಟಗಿ, ಬಸವರಾಜ್ ಗುಡಸ್, ಸಿದ್ಧಾರ್ಥ ಗುಡಸ್. ರಮೇಶ್ ಭರಾಜಿ, ಸಚಿನ್ ಗುಡಸ್, ಸಂತೋಷ್ ಗುಡಸ್,ಕುಮಾರ್ ಗೊಡಿಯಾಳ, ಬಸವರಾಜ್ ಹಂಪಣ್ಣವರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!