Dharwad

ಬೆಂಗಳೂರು ಕಾಲ್ತುಳಿತಕ್ಕೆ ಪ್ರತಿಭಟಿಸುವ ಬಿಜೆಪಿಗರು…ಬೇರೆ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಾಗ ಏನ್ ಮಾಡಿದ್ರು??

Share

ಬೆಂಗಳೂರು ಕಾಲ್ತುಳಿತ ಪ್ರಕರಣವನ್ನು ಖಂಡಿಸಿ ಬಿಜೆಪಿಗರು ಮಾಡುತ್ತಿರುವ ಪ್ರತಿಭಟನೆಗಳಿಗೆ ಆಕ್ಷೇಪವಿಲ್ಲ. ಆದರೇ, ಯುಪಿ ಸೇರಿದಂತೆ ಬೇರೆ ರಾಜ್ಯಗಳಲ್ಲಿಯೂ ಇಂತಹ ಘಟನೆಗಳು ನಡೆದಾಗ ಬಿಜೆಪಿಗರು ಏನು ಮಾಡಿದ್ದರೂ ಎಂಬುದನ್ನು ತಿಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಬೆಂಗಳೂರು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಸಿಎಂ-ಡಿಸಿಎಂ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ವಿಚಾರವಾಗಿ ಧಾರವಾಡದಲ್ಲಿ ಮಾಧ್ಯಮಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರ ಪ್ರತಿಭಟನೆಗೆ ನಮ್ಮ ಆಕ್ಷೇಪವಿಲ್ಲ. ಆದರೇ, ಉತ್ತರ ಪ್ರದೇಶದ ಕುಂಭಮೇಳದ ಕಾಲ್ತುಳಿತ ಸೇರಿದಂತೆ ಬೇರೆ ಬೇರೆ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಾಗ ಅವರೇನು ಮಾಡಿದ್ದಾರೆ ಎಂಬುದನ್ನು ಮೊದಲೂ ಕೇಳಿ. ಇದಕ್ಕೆ ಸಂಬಂಧಿಸಿದಂತೆ ಅಧಿವೇಶನ ಕರೆದು ಸರ್ಕಾರ ತಿರ್ಮಾನಿಸಲಿದೆ ಎಂದರು.

ಇನ್ನು ಒಂದೇ ರಾತ್ರಿಯಲ್ಲಿ 70 ಮಿಮೀ. ಮಳೆ ಸುರಿದ ಧಾರವಾಡ ಜಿಲ್ಲೆಯ ನವಲಗುಂದ- ಕುಂದಗೋಳ ಕ್ಷೇತ್ರಗಳಲ್ಲಿ ಹಾನಿ ಸಂಭವಿಸಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಜೀವಹಾನಿಯಾಗದಂತೆ ಮುನ್ನೆಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದರು.

ಇನ್ನು ಬುದ್ದ ಬಸವ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಎಮೋಷನ್ ಆಗಿ ರಾಜಕೀಯ ವೈರಾಗ್ಯದ ಮಾತುಗಳನ್ನಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯವೇ ನನ್ನ ಜೀವನದ ಗುರಿಯಲ್ಲ. ರಾಜಕೀಯ ಇದ್ದರೂ ಇರದಿದ್ದರೂ ಸಮಾಜಸೇವೆ ನಿರಂತರವಾಗಿರಲಿದೆ. ನಿನ್ನೆಯದ್ದು ಭಾವುಕವಾಗಿ ಹೇಳಿರುವ ಮಾತು. ಅದನ್ನು ರಾಜಕರಣ ಮಾಡುವುದು ಬೇಡ ಎಂದರು.

Tags:

error: Content is protected !!