Dharwad

ಬಿಜೆಪಿ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ…. ಮತ್ತೆ ಜೈಲು ಪಾಲಾಗುತ್ತಾರೋ ಕುಲಕರ್ಣಿ…

Share

2016 ಜೂನ್ 15 ರ ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಗೊಳಿಸಿ7 ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದೆ.‌ ಇದೇ ಈಗ ಧಾರವಡದಲ್ಲಿ ಕುಲಕರ್ಣಿ ಮತ್ತೆ ಜೈಲು ಪಾಲಾಗುತ್ತಾರೋ ಎಂಬ ಚರ್ಚೆಯನ್ನು ಬಲು ಜೋರಾಗಿದೆ. ಅರೇ ಏನಿದೂ ಅಂತೀರಾ ಅದರ ಕಂಪ್ಲೀಟ್ ಕಥೆ ಇಲ್ಲಿದೆ ನೋಡಿ.

GFX START 

ಧಾರವಾಡ ಗ್ರಾಮೀಣ ಕೈ ಶಾಸಕ ವಿನಯ ಕುಲಕರ್ಣಿ ಮತ್ತೆ ಸಂಕಷ್ಟ

ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣ ಸಾಕ್ಷಿ ನಾಶಾ ಕೇಸನಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಕುಲಕರ್ಣಿ

ಕುಲಕರ್ಣಿ ಜಾಮೀನು ರದ್ದು ಮಾಡಿರುವ ಸುಪ್ರೀಂ 7 ದಿನಗಳ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅದೇಶ

Gfx end

ಕಳೆದ 2016 ಜೂನ 15 ರಂದು ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದ ಸಾಕ್ಷಿ ನಾಶ ಕೇಸನಲ್ಲಿ ಧಾರವಾಡ ಗ್ರಾಮೀನ‌ಶಾಸಕ ವಿನಯ ಕುಲಕರ್ಣಿಯನ್ನು ಸಿಬಿಐ ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲಿಗೆ ತೆರಳಿದರು. ಸುಮಾರು ಒಂಬತ್ತು ತಿಂಗಳ ಬಳಿಕ 2021ರ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ‌ನಿಂದ ಜಾಮೀನು ಪಡೆದಕೊಂಡು ಹೊರ ಬಂದಿದ್ದರು. ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಾಗಿಲ್ಲವೆಂದು ಷರತ್ತುಬದ್ಧ ಜಾಮೀನವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ವಿನಯ ಕುಲಕರ್ಣಿಯವರಿಗೆ ನೀಡಿತ್ತು. ಆದರೆ ಅದೇ ಜಾಮೀನವನ್ನು ಸುಪ್ರೀಂ ಕೋರ್ಟ್ ರದ್ದು‌ ಮಾಡಿದ್ದು, ಕುಲಕರ್ಣಿಗೆ ಸಂಕಷ್ಟ ಬಂದೊದಗಿದೆ. ವಿನಯ ಕುಲಕರ್ಣಿ ಮತ್ತೆ ಸಾಕ್ಷಿಗಳ ಮೇಲೆ ಪ್ರಭಾವ ಹಾಗೂ ಬೆದರಿಕೆ ಹಾಕಲು ಮುಂದಾಗಿರುವ ಕುರಿತು ಸಿಬಿಐ ಸುಪ್ರೀಂ ಕೋರ್ಟ್ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟನ ದ್ವಿ ಸದಸ್ಯ ಪೀಠ ಈಗ ವಿನಯ ಕುಲಕರ್ಣಿ ಜಾಮೀನು ರದ್ದು ಮಾಡಿ ಆದೇಶ ನೀಡಿದ್ದು, ಮತ್ತೆ ವಿನಯ ಕುಲಕರ್ಣಿ ಜೈಲು ಸೇರುತ್ತಾರೋ ಎಂಬ ಚರ್ಚೆ ಈಗ ಬಲು ಜೋರಾಗಿದೆ.‌

ಸದ್ಯ ಸುಪ್ರಿಂ ಕೋರ್ಟ ಕುಲಕರ್ಣಿ ಜಾಮೀನು ರದ್ದು ಮಾಡಿದ್ದು, 7 ದಿನಗಳ ಒಳಗೆ ವಿನಯ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಯೋಗೀಶ್‌ ಗೌಡ ಅವರು ಧಾರವಾಡದಲ್ಲಿ ನಾಯಕರಾಗಿ ಬೆಳೆಯುವುದು ವಿನಯ್ ಕುಲಕರ್ಣಿ ಅವರಿಗೆ ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಕುಲಕರ್ಣಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೀಗಾಗಿಯೇ ಬಿಜೆಪಿ ಮುಖಂಡ ಯೋಗೀಶ್‌ಗೌಡ ಅವರನ್ನು ಕೊಲ್ಲಲು ಹಣ ನೀಡಿದ್ದರು ಎಂದು ಸಿಬಿಐ ಆರೋಪಿಸಿದೆ. ಇನ್ನೂ ಜಾಮೀನು ರದ್ದು ಕುರಿತು ಹತ್ಯೆಯಾದ ಯೋಗೇಶಗೌಡ ಅಣ್ಣ ಗುರುನಾಥಗೌಡ ಗೌಡರ ಪ್ರತಿಕ್ರಿಯಿಸಿ ನನ್ನ ತಮ್ಮ‌ನ ಸಾವಿಗೆ ಕಾರಣವಾಗಿರುವ ನೀಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.‌

ವಿನಯ ಕುಲಕರ್ಣಿ ಜಾಮೀನು‌ ರದ್ದಗೆ ಸುಫ್ರೀಂ ಕೋರ್ಟ್ ಅರ್ಜಿ ಸಲ್ಲಿಸುವ ಮುನ್ನ ಸಿಬಿಐ ಅಗತ್ಯ ದಾಖಲೆಗಳನ್ನು ಸಿದ್ಧಮಾಡಿಕೊಂಡು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದು, ದಾಖಲೆಗಳ ನೋಡಿದ ಸುಪ್ರೀಂಕೋರ್ಟ್ ದ್ವಿ ಸದಸ್ಯ ಪೀಠ ಈಗ ಜಾಮೀನು ರದ್ದು ಮಾಡಿದೆ. ಸದ್ಯ ಈಗ ಧಾರವಾಡ ಸೇರಿ ವಿನಯ ಆಪ್ತ ಬಳಗದಲ್ಲಿ ಮತ್ತೆ ಕುಲಕರ್ಣಿ ಜೈಲು‌ ಸೇರುವುದು ಪಕ್ಕಾನಾ ಎಂಬ ಚರ್ಚೆಯನ್ನು ಹುಟ್ಟು ಹಾಕಿರುವುದು ಸುಳ್ಳಲ್ಲ..

ಮಂಜುನಾಥ ಡಿ ಇನ್ ನ್ಯೂಸ್ ಧಾರವಾಡ..

Tags:

error: Content is protected !!