ಬೆಳಗಾವಿ ತಾಲೂಕಿನ ಹೊಸ ಇದ್ದಲಹೊಂಡ ಬಳಿಯ ಶಿವಾಪೂರದಲ್ಲಿ ಶ್ರೀ ದುರ್ಗಾದೇವಿ ಮಂದಿರದ ಕಳಸಾರೋಹನ ಸಮಾರಂಭವು ಅತ್ಯಂತ ಭಕ್ತಿಭಾವದಲ್ಲಿ ನಡೆಯಿತು.
ಬೆಳಗಾವಿ ತಾಲೂಕಿನ ಹೊಸ ಇದ್ದಲಹೊಂಡ ಬಳಿಯ ಶಿವಾಪೂರದಲ್ಲಿ ಶ್ರೀ ದುರ್ಗಾದೇವಿ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಶ್ರೀ ದುರ್ಗಾದೇವಿ ಮಂದಿರದ ಕಳಸಾರೋಹನ ಸಮಾರಂಭವು ಅತ್ಯಂತ ಭಕ್ತಿಭಾವದಲ್ಲಿ ನಡೆಯಿತು. ಹತ್ತರಗಿಯ ಸಿದ್ಧೇಶ್ವರ ಸುಕ್ಷೇತ್ರ ಕಾರಿಮಠದ ಶ್ರೀ ಗುರುಸಿದ್ಧೇಶ್ವರ ಸ್ವಾಮಿಜೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ದುರ್ಗಾದೇವಿಯ ಭಕ್ತರು ಭಾಗಿಯಾಗಿದ್ಧರು.