ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಸೋಮಲಪೂರ ಗ್ರಾಮದಲ್ಲಿ ಕಳಪೆ ಹತ್ತಿ ಬೀಜ ವಿತರಣೆಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಅಗ್ರೋ ಅಮರ್ ಬೈಟೆಕ್ ಕಾಟನ್ ಸೀಡ್ಸ್ ಕಂಪನಿಯಿಂದ ವಿತರಣೆಗೊಂಡ ಬೀಜಗಳಿಂದ ಬಿತ್ತನೆ ಮಾಡಲಾಗಿದೆ. ಆದರೇ ಹೂ-ಕಾಯಿ ಬೆಳೆಯದೇ ಸಂಪೂರ್ಣ ನಷ್ಟವಾಗಿದೆ. ರೈತ ವೆಂಕಟೇಶ್ ತನ್ನ 2 ಎಕರೆ ಹಾಗೂ ರೈತ ಬಸವರಾಜ್ ತನ್ನ 4 ಎಕರೆ ಹತ್ತಿ ಬೀಜ ಭಿತ್ತಿದ್ದರು. ಹೂ-ಕಾಯಿ ಬಾರದ ಹಿನ್ನೆಲೆ ಕುರಿಗಾಯಿಗಳು ಬೆಳೆ ಮೇಯಿಸುವ ದೃಶ್ಯ ಇದೀಗ ಸಾಮಾನ್ಯವಾಗಿದೆ.
ಕಳಪೆ ಬೀಜ ವಿತರಿಸಿದ ಕಂಪನಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರೈತ ಮುಖಂಡರು, ಸರಕಾರದಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಂತಹ ಕಂಪನಿಗಳಿಗೆ ಪಾಠ ಕಲಿಸಲು ಕಠಿಣ ಕ್ರಮ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದ್ದಾರೆ.