ಬೆಳಗಾವಿ: ಬೆಳಗಾವಿಯ ಕನ್ನಡ ಭವನದಲ್ಲಿ ಶಾಂತಾ ಮಸೂತಿ ಅವರ ಜೀವನ ಜಾತ್ರೆ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ಜರುಗಿತು
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಳಗಾವಿ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಕಥಾ ಸಂಕಲನದಲ್ಲಿ ಮಾನವೀಯ ಬದುಕಿನ ಬೇರೆ ಬೇರೆ ಮುಖಗಳ ಚಿತ್ರಣವನ್ನು ಕಥೆಗಳ ಮೂಲಕ ಹೆಣೆಯಲಾಗಿದೆ ಮಸೂತಿಯವರ ಸಾಹಿತ್ತಿಕ ಸೇವೆ ಶ್ಲಾಘನೀಯವೆಂದು ಶ್ರೀಗಳು ಹೇಳಿದರು.
ಶ್ರೀಶೈಲ್ ಮಸೂತಿ ಹಾಗೂ ಶಾಂತಾ ಮಸೂತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಯ.ರು. ಪಾಟೀಲ,ಡಾ. ಗುರುದೇವ ಹುಲೆಪ್ಪನವರ ಮಠ, ಪ್ರೊ. ಶ್ರೀಕಾಂತ ಶಾನವಾಡ, ಡಾ. ಭಾರತಿ ಮಠದ, ಡಾ. ಬಸವರಾಜ್ ಜಗಜಂಪಿ, ರತ್ನಪ್ರಭಾ ಬೆಲ್ಲದ, ಶೈಲಜಾ ಬಿಂಗೆ, ಎಂ.ಎಸ್.ಇಂಚಲ, ಜ್ಯೋತಿ ಬಾದಾಮಿ, ಲಲಿತಾ ಪರ್ವತ ರಾವ್, ಕಸಾಪ ಕಾರ್ಯದರ್ಶಿ ಎಮ್.ವೈ ಮೆಣಸಿನಕಾಯಿ,ಆಶಾ ಯಮಕನಮರಡಿ, ಶಿವಾನಂದ ಮಸೂತಿ, ಶಿವಪುತ್ರ ಇಂಚಲ, ಸಾಗರ ಮಸೂತಿ ಹಾಗೂ ಲೇಖಕಿಯರ ಸಂಘ, ಬಸವಕಾಲನಿ ನಿವಾಸಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು
