ಜಮೀನಿನಲ್ಲಿನ ಸೀಮೆಗಾಗಿ ಕೌಟುಂಬಿಕ ಜಗಳವು ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ನಡೆದಿದೆ. ಚಿಕ್ಕಪ್ಪನಿಂದ ಅಣ್ಣನ ಮಗನ ಬರ್ಬರ ಹತ್ಯೆ ಮಾಡಲಾಗಿದೆ.
ಕೊಡಲಿಯಿಂದ ಅರ್ಧ ಕುತ್ತಿಗೆ ಕಡಿದು ಹತ್ಯೆ ಮಾಡಲಾಗಿದೆ. ಬೀರಪ್ಪ ಸೀರೆಪ್ಪ ಸಲಗರ ಊರ್ಪ್ ಸೊಲಂಕರ ಹತ್ಯೆಯಾಗಿದ್ದು ಚಿಕ್ಕಪ್ಪ ಅಮಸಿದ್ದ ಸಿದ್ದರಾವ ಸಲಗರ ಊರ್ಪ ಸೊಲಂಕರ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡಸಿದ್ದಾರೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
