Belagavi

ಬರಗೂರು ರಾಮಚಂದ್ರಪ್ಪನವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ; ಎಸ್.ಐ. ಬಿರಾದಾರ

Share

ಅನ್ಯರ ಪ್ರತಿ ಪ್ರೀತಿ ವಾತ್ಸಲ್ಯವನ್ನು ತೋರಿ ಬದುಕನ್ನು ಅನುಭವಿಸಬೇಕು. ಇಂತಹ ವ್ಯಕ್ತಿತ್ವವನ್ನು ನಾಡೋಜ್ ಬರಗೂರು ರಾಮಚಂದ್ರಪ್ಪನವರು ಹೊಂದಿದ್ದಾರೆಂದು ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್‌.ಐ. ಬಿರಾದಾರ ಹೇಳಿದರು.

ಬೆಳಗಾವಿಯ ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು, ಬೆಳಗಾವಿ ಇವರು ಸಂಯುಕ್ತವಾಗಿ ಆಯೋಜಿಸಿರುವ “ಬಸವರಾಜ ಕಟ್ಟಿಮನಿ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ” ಹಾಗೂ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಬದುಕು ಮತ್ತು ಸಾಧನೆ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ನಾಡೋಜ ಡಾ. ಮನು ಬಳಿಗಾರ್ ಅವರು ವಿಚಾರ ಸಂಕಿರಣಕ್ಕೆ ಚಾಲನೆಯನ್ನು ನೀಡಿದರು. ಅವರು ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸಾಹಿತ್ಯ, ನಾಟಕ, ಸಿನಿಮಾ, ಚಿಂತನೆ ಮತ್ತು ಸಾರ್ವಜನಿಕ ಜೀವನದಲ್ಲಿ ನೀಡಿರುವ ಅಮೂಲ್ಯ ಕೊಡುಗೆಯನ್ನು ಕುರಿತು ವಿಶೇಷ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ನಾಟಕಕಾರ ಡಾ. ಡಿ.ಎಸ್‌. ಚೌಗಲೆ, ಡಾ. ಎಚ್.ಬಿ. ಕೋಲಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪ್ರೊ. ಬಿ.ಬಿ. ಬಿರಾದಾರ, ಪ್ರೊ. ಅಶೋಕ ಕಾಂಬಳೆ, ಡಾ. ನಾಗರಾಜ ಮುರಗೋಡ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

ಕನ್ನಡ ಅಧ್ಯಾಪಕರ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್‌.ಐ. ಬಿರಾದಾರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬರಗೂರು ರಾಮಚಂದ್ರಪ್ಪನವರು ತಮ್ಮೆಲ್ಲ ವಿಚಾರಗಳಲ್ಲಿ ಪ್ರಕೃತಿಗೆ ಮಹತ್ವವನ್ನು ನೀಡಿದ್ದಾರೆ. ಒಳ್ಳೆಯ ಸಮಾನ ಮನಸ್ಕರನ್ನು ತೊಡಗಿಸಿಕೊಂಡು ಸದಾ ಕಾರ್ಯಪ್ರವೃತ್ತರಾದವರು. ಬದುಕನ್ನು ಅನುಭವಿಸಬೇಕು. ಅನ್ಯರ ಪ್ರತಿ ಪ್ರೀತಿ ವಾತ್ಸಲ್ಯವನ್ನು ತೋರಬೇಕು. ಇಂತಹ ವ್ಯಕ್ತಿತ್ವ ಬರಗೂರು ರಾಮಚಂದ್ರಪ್ಪನವರದ್ದು. ಸಾಹಿತಿ ಮನು ಬಳಿಗಾರ ಅವರು ಬರಗೂರು ರಾಮಚಂದ್ರಪ್ಪನವರ ವಿಚಾರಗಳನ್ನು ನಮ್ಮಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.

ಈ ಕಾರ್ಯಕ್ರಮದ ಪ್ರಯುಕ್ತ ಬಸವರಾಜ ಕಟ್ಟಿಮನಿ ಕಾದಂಬರಿ ಪ್ರಶಸ್ತಿಯು ಆಯ್ದ ಲೇಖಕರಿಗೆ ನೀಡಿ ಗೌರವಿಸಲಾಯಿತು.ಸಂದರ್ಭದಲ್ಲಿ ಡಾ. ಸುರೇಶ್ ಹನಗಂಡಿ , ಡಾ. ವಿಜಯಮಾಲಾ ನಾಗನೂರಿ, ಡಾ. ಯಲ್ಲಪ್ಪ ಹಿಮ್ಮಡಿ, ಸಾಹಿತ್ಯ ಪ್ರೇಮಿಗಳು ಮತ್ತು ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!