ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಮತ್ತು ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಇವರ ಮಾರ್ಗದರ್ಶನದಲ್ಲಿ, APMC ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಸಾಗಣೆಯ ವಿರುದ್ಧ ಯಶಸ್ವಿ ದಾಳಿ ನಡೆಸಲಾಗಿದೆ.
ದಿನಾಂಕ 28.06.2025 ರಂದು, ಶಾಹೂನಗರ್ – ಕಂಗ್ರಾಳ ಬಿಕೆ ಮುಖ್ಯ ರಸ್ತೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿ ಮನೋಹರ್ ಅಲಿಯಾಸ್ ಬಾಳು ಗಜಾನನ್ ಹುದ್ದಾರ್ (ನಿವಾಸಿ: ಕಂಗ್ರಾಳಿ ಬಿಕೆ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 3.500 ಕಿಲೋಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 88,700), ಒಂದು ಮಾರುತಿ ಎಸ್ಟೀಮ್ ಕಾರು (ನಂ. MH-02-AL-4379), ಮತ್ತು ರೂ. 3,700 ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಕಾರ್ಯಾಚರಣೆ ಪೊಲೀಸರ ವಿಶೇಷ ತಂಡದ ನೇತೃತ್ವದಲ್ಲಿ ನಡೆದಿದೆ. ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ನಂದಿಶ್ವರ್ ಕುಂಬಾರ್ (ಸಿಸಿಬಿ, ಬೆಳಗಾವಿ ನಗರ), ಪಿಎಸ್ಐ ಮಂಜುನಾಥ್ ಭಜಂತ್ರಿ ಮತ್ತು ಸಿಬ್ಬಂದಿಗಳಾದ ಎಚ್ಸಿ ಐಎಸ್ ಪಾಟೀಲ್, ಎಸ್ಬಿ ಪಾಟೀಲ್, ಪಿಸಿ ಎಎನ್ ರಾಮಗೂನಟ್ಟಿ, ಜಗದೀಶ್ ಹಾದಿಮನಿ, ಅಮರನಾಥ ದಂಡಿನ್, ಸಚಿನ್ ಸಿಂಧೆ ಮತ್ತು ಎಂಎಸ್ ಪಾಟೀಲ್, ಎಸ್ ಮುಗಳಖೋಡ್ ಇನ್ನುಳಿದವರ ತಂಡ ಈ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.