Banglore

ಬೆಂಗಳೂರು ಕಾಲ್ತುಳಿತ ದುರಂತ; ತನಿಖಾ ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ

Share

ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದನ್ನ ಸರ್ಕಾರ ಪ್ರಾಯೋಜಿತ ಹತ್ಯಾಕಾಂಡ ಎನ್ನುವ ಬಿಜೆಪಿಗರು ತಮ್ಮ ಕಾಲದಲ್ಲಿ ನಡೆದ ಘಟನೆಗಳ ಚಕಾರ ಏಕೆ ಎತ್ತುವುದಿಲ್ಲವೆಂದು ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿದ್ದು, ಅನುಮತಿ ನೀಡಿದವರು ಯಾರು ಮತ್ತು ಭದ್ರತಾ ವೈಫಲ್ಯದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದ್ದಾರೆ. ತನಿಖಾ ವರದಿ ಬಂದ ನಂತರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಡಿಸಿಎಂ ಫ್ಲ್ಯಾಗ್ ಹಿಡಿದು ಭಾಗವಹಿಸಿದ್ದು ಅವರ ವೈಯಕ್ತಿಕ ವಿಚಾರ ಎಂದ ಅವರು, ಬಿಜೆಪಿ ರಾಜ್ಯಗಳ ವೈಫಲ್ಯದ ಬಗ್ಗೆಯೂ ಪ್ರಸ್ತಾಪಿಸಿ, ವರದಿ ಬರುವ ಮುನ್ನವೇ ಆತುರದ ತೀರ್ಮಾನ ಬೇಡ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದರು. ಸರ್ಕಾರ ಪ್ರಾಯೋಜಿತ ಹತ್ಯಾಕಾಂಡವೆಂಬ ಬಿಜೆಪಿಗರ ಆರೋಪಕ್ಕೆ ಅವರ ಕಾಲದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಅದರ ಬಗ್ಗೆ ಅವರು ಚಕಾರ ಎತ್ತಿವುದಿಲ್ಲ ಎಂದರು.

Tags:

error: Content is protected !!