ಬೈಲಹೊಂಗಲ ತಾಲೂಕಿನ ಭಾವಿಹಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಜಕ್ಕನಾಯನಕೊಪ್ಪ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುತ್ತಿರುವ ಕೂಲಿಕಾರ್ಮಿಕರಿಗೆ ಪಿಡಿಓ ನಿಮಗೆ ಕೆಲಸವಿಲ್ಲ ಹೋಗಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಪಿಡಿಓ ಈರಮ್ಮ ಅಂಗಡಿಯವರನ್ನು ಮಾಧ್ಯಮದವರು ಇದೆ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ ಮಾಧ್ಯಮದವರ ಜೊತೆಯೂ ಅವರು ವಾಗ್ವಾದ ಮಾಡಿದ್ದಾರೆ.
ಜಕ್ಕನಾಯನಕೊಪ್ಪದ ಕೂಲಿ ಕಾರ್ಮಿಕರು ಪ್ರತಿ ದಿನ ಬರುವ ಹಾಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಬಂದಿರುತ್ತಾರೆ ಆದರೆ ಅವರನ್ನು ನಿಲ್ಲಿಸಿ ಜಿಪಿಎಸ್ ಫೋಟೋ ತೆಗೆಯಬೇಕಾದ ಸಮಯ ಮೀರಿ ಹೋಗಿದ್ದರಿಂದ ಪಿಡಿಓ ಈರಮ್ಮ ಅಂಗಡಿ ಇವತ್ತು ನಿಮಗೆ ಕೆಲಸವಿಲ್ಲ ಮನೆಗೆ ಹೋಗಿ ಎಂದು ಉದ್ಧಟತನದ ಮಾತನಾಡಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಗೆ ಜಕ್ಕನಾಯನಕೊಪ್ಪದ 114 ಜನ ಕೂಲಿ ಕಾರ್ಮಿಕರು ಮುಂಜಾನೆ 6 ಗಂಟೆಗೆ ಅಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ಕೆಲಸ ಮಾಡಲು ಬಂದಿರುತ್ತಾರೆ 12 ಗಂಟೆಗಳಾದರೂ ಅವರ ಜಿಪಿಎಸ್ ಫೋಟೋ ತೆಗೆಯಲು ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದಾಗ ಪಿಡಿಓ ಈರಮ್ಮ ಅಂಗಡಿಗೆ ಕರೆ ಮಾಡಿದಾಗ ಇವತ್ತು ನಿಮ್ಮ ಕೆಲಸ ಮಳೆಯಿಂದಾಗಿ ಬಂದಾಗಿರುತ್ತದೆ ನೀವು ಮನೆಗೆ ಹೋಗಿ ಎಂದು ತಿಳಿಸುತ್ತಾರೆ ಇದರಿಂದಾಗಿ ರೊಚ್ಚಿಗೆದ್ದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರು ನಮಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೆ ನಾವು ಬೇರೆಯವರ ಕೆಲಸಕ್ಕೆ ಹೋಗುತ್ತಿದ್ವಿ ಇವಾಗ ಕೆಲಸವಿಲ್ಲ ಎಂದು ಹೇಳಿದರೆ
ನಾವು ಎನ್ ಮಾಡಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ನಾವು ಇಂದು ಬೇರೆಯವರ ಕೆಲಸಕ್ಕೆ ಹೋಗಿದ್ದರೆ ನಮಗೆ ಅಲ್ಲಿ ಕೂಲಿಯಾದರೂ ಸಿಕ್ತಾ ಇತ್ತು. ಇವಾಗ ಅದು ಕೂಡ ಇಲ್ಲ ಪಿಡಿಓ ಈರಮ್ಮ ಅಂಗಡಿ ಈ ರೀತಿ ವರ್ತಿಸಿದರೆ ನಮ್ಮ ಜೀವನ ನಡೆಯುವುದಾದರೂ ಹೇಗೆ ಎಂದು ಕಾರ್ಮಿಕರ ಪ್ರಶ್ನಿಸಿದರು ವಿಷಯ ತಿಳಿದ ಬೈಲಹೊಂಗಲ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಹೂಲಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲು ಸೂಚನೆ ನೀಡಿದರು
ಆದರೆ ಭಾವಿಹಾಳ ಪಿಡಿಓ ಮಾತ್ರ ಕೂಲಿ ಕಾರ್ಮಿಕರದ್ದೇ ತಪ್ಪು ಎಂಬಂತೆ ಅವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದೇ ಪಿಡಿಓ ಈರಮ್ಮ ಅಂಗಡಿ ಸರಕಾರ ಕೊಟ್ಟಿರುವ ಐಡಿ ಕಾರ್ಡ್ಗಳನ್ನು ಕೂಡ ಬಳಸುವುದಿಲ್ಲ ಮಾಧ್ಯಮದವರು ಕೇಳಲು ಹೋದರೆ ಉಡಾಫೆ ಉತ್ತರ ನೀಡುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸರಕಾರ ಕೊಟ್ಟಿರುವ ಮೆಡಿಕಲ್ ಕಿಟ್ ಗಳನ್ನು ಕೂಡ ಪಿಡಿಓ ನೀಡುವುದಿಲ್ಲ ಎಂದು ಕೂಲಿ ಕಾರ್ಮಿಕರು ಆರೋಪ ಮಾಡಿದ್ದಾರೆ.
ಇಲ್ಲಿ ಅಧಿಕಾರಿಗಳ ತಪ್ಪೊ ಅಥವಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಬಂದಿರುವ ಕೂಲಿಕಾರ್ಮಿಕರ ತಪ್ಪೊ ತಿಳಿಯುತ್ತಿಲ್ಲ ಆದರೆ ಬಡವರಿಗೆ ಆಗಿರುವ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಬೇಕು ಎಂಬುದಷ್ಟೇ ನಮ್ಮ ಆಶಯ