ಕಾಗವಾಡ ಕ್ಷೇತ್ರ ರಾಜು ಕಾಗೆ ಮಾತನಾಡಿ ಕೃಷ್ಣಾ ನದಿ ಮೇಲೆ ಮೂರು ಸೇತುವೆಗಳು ಕಟ್ಟಿಸಲು 2018ರಲ್ಲಿ ಶಂಕು ಸ್ಥಾಪನೆವಾಗಿದೆ 2023 ರಲ್ಲಿ ಸೇತುವೆಗಳು ಲೋಕಾರ್ಪಣೆ ಮಾಡಬೇಕಾಗಿತ್ತು. ಆದರೆ 2019ರಲ್ಲಿ ಮಹಾಪೂರ ಹಾಗೂ ಕರೋನಾ ಮಹಾಮಾರಿ ಬಂದಿದ್ದರಿಂದ ವಿಳಂಬವಾಗಿದೆ. ಕರ್ನಾಟಕದಲ್ಲಿರುವ ಕುಡಚಿ ಮತ್ತು ಮೂಳವಾಡ ಈ ಸೇತುವೆಗಳಿಗೆ ಅಷ್ಟೇನು ಸಮಸ್ಯೆ ಇಲ್ಲ ಆದರೆ ಜುಗುಳು- ಖಿತ್ರಾಪುರ ಮಧ್ಯದ ಸೇತುವೆ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಇದರಿಂದ ವಿಳಂಬವಾಗಿದೆ. ಇನ್ನೊಂದು ಅಂದರೆ ನಮ್ಮ ಸರ್ಕಾರದ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತರುತ್ತಿದ್ದರಿಂದ ಈ ಕಾಮಗಾರಿಗೆ ವಿಳಂಬವಾಗಿದೆ ಎಂದು ಸ್ಪಷ್ಟವಾಗಿ ಶಾಸಕರು ಹೇಳಿದರು. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.