Chikkodi

ರಾಜ್ಯದ ಆರ್ಥಿಕತೆ ದಿವಾಳಿಯಾಗಿದೆ:ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ

Share

ಚಿಕ್ಕೋಡಿ: ರಾಜ್ಯದ ಆರ್ಥಿಕತೆ ದಿವಾಳಿ ಹಿಡದಿದೆ..ಇಂತಹದರಲ್ಲಿ ಯಾವ ಪುರುಷಾರ್ಥಕ್ಕೆ ಎರಡು ವರ್ಷಗಳ ಸಾಧನೆ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಆಕ್ರೋಶವನ್ನು ಹೋರಹಾಕಿದರು.

ಚಿಕ್ಕೋಡಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ.ಕೇಂದ್ರ ಸರ್ಕಾರ ಗರ್ಭೀಣಿ ತಾಯಂದಿಯರಿಗೆ ಯೋಜನೆ ತಂದಿದೆ.ಆದ್ರೆ ರಾಜ್ಯಸರ್ಕಾರ ಅದನ್ನು ಸರಿಯಾಗಿ ಜಾರಿಗೆ ತಂದಿಲ್ಲ.ಬಹುಮತ ಇದ್ದರು ಮುಖ್ಯಮಂತ್ರಿ,ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕಚ್ಚಾಟ ನಿಂತಿಲ್ಲ.ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ.ಎಸ್.ಸಿ.ಎಸ್.ಟಿ ಅನುದಾನ ದುರ್ಬಳಕೆ ಮಾಡಿದ್ದಿರಿ.ಗೃಹ ಇಲಾಖೆಯ ವಿಫಲವಾಗಿದೆ.ದೇಶದ ಜೊತೆಗೆ ನಿಲ್ಲಬೇಕಾದ ಮುಖ್ಯಮಂತ್ರಿಗಳು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ ಇದೆ ನಿಮ್ಮ ಸಾಧನೆಯಾ ಎಂದು ಪ್ರಶ್ನೆಸಿದರು.

ಸಚಿವ ಸಂತೋಷ ಲಾಡಯವರಿಗೆ ಪ್ರಧಾನಿಯವರನ್ನು ಟೀಕೆ ಮಾಡುವ ಟಾಸ್ಕ ನೀಡಿದ್ದಾರೆ. ಅದಕ್ಕೆ ಸದಾ ಅವರು ಪ್ರಧಾನಿಯವರನ್ನು ಟೀಕೆ ಮಾಡುತ್ತಾರೆ.ರಾಜ್ಯದಲ್ಲಿ ಪ್ರತಿಯೊಂದು ಬೆಲೆ ಏರಿಕೆ ಆಗುತ್ತಿದೆ.ಆಸ್ತಿ ಮೌಲ್ಯ,ವಿದ್ಯುತ್, ಹಾಲು,ಸಾರಿಗೆ,ಮದ್ಯದ ದರ ಹೆಚ್ಚಳ ಮಾಡಿದಿರಿ.ಇದಕ್ಕೆಲ್ಲ ಸಾಧನಾ ಸಮಾವೇಶದಲ್ಲಿ ಜನರಿಗೆ ಉತ್ತರ ನೀಡಬೇಕು ಎಂದು ಈರಣ್ಣಾ ಕಡಾಡಿ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ,ನಿಖಿಲ ಕತ್ತಿ,ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!