Dharwad

ಗ್ರಾಮೀಣ ಭಾಗದಲ್ಲೂ ಸೇವಾ ಭಾರತಿ ಟ್ರಸ್ಟ್ ಹಾಗೂ ಮಂಜುನಾಥ ಮಕ್ಕಳಗೇರಿ ಸಮಾಜ ಸೇವೆ ಕಾರ್ಯ… ಧಾರವಾಡ ತಾ.ಕನಕೂರು ವಾಸನ‌ ಐ ಕೇರ ಸಂಸ್ಥೆ ಸಹಾಯದಿಂದ ಗ್ರಾಮಸ್ಥರಿಗೆ ಉಚಿತ ಕಣ್ಣಿನ ತಪಾಸಣೆ.

Share

ಇಷ್ಟು ದಿನ‌ ಧಾರವಾಡ ನಗರಗಳಲ್ಲಿ ದೇವಸ್ಥಾನ‌ಸೇರಿ ಸಾರ್ವಜನಿಕ ಸ್ಥಳಗಳಲ್ಲಿನ‌ನೀರಿನ ಟ್ಯಾಂಕ್ ಸೇರಿ ಇತರೆ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ ಸೇವಾ ಭಾರತಿ ಟ್ರಸ್ಟ್ ಮತ್ತು ಮಂಜುನಾಥ ಮಕ್ಕಳಗೇರಿ ಸಮಾಜ ಸೇವೆಯ ಕಾರ್ಯ ಇದೀಗ ಧಾರವಾಡ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದ್ದು, ಇಂದು ಧಾರವಾಡದ ಕನಕೂರು ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಸಿಬಿರ ನಡೆಸಲಾಯಿತು. ‌

ಧಾರವಡ ತಾಲೂಕಿನ ಕನಕೂರು ಗ್ರಾಮದಲ್ಲಿಂದು ಸೇವಾ ಭಾರತಿ ಟ್ರಸ್ಟ್ ಹಾಗೂ ಮಂಜುನಾಥ ಮಕ್ಕಳಗೇರಿ ಟೀಂ ಮತ್ತು ವಾಸನ‌ಐ ಕೇರ ಸಂಸ್ಥೆ ನೇತೃತ್ವದಲ್ಲಿ ಗ್ರಾಮಸ್ಥರಿ ಉಚಿತ ಕಣ್ಣಿನ‌ ತಪಾಸಣೆ ಸಿಬಿರ ಜರುಗಿತ್ತು. ಗ್ರಾಮದ ಜನರು ಸರತಿ‌ಸಾಲಿನಲ್ಲಿ‌ ನಿಂತು ತಮ್ಮ ಕಣ್ಣುಗಳನ್ನು‌ ತಪಾಸಣೆ ಮಾಡಿಕೊಂಡು ವೈದ್ಯರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡು.‌ ಮಂಜುನಾಥ ಶಿವಪ್ಪ ಮಕ್ಕಳಗೇರಿ ಅವರ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಇಲ್ಲಿಯವರಗೆ 57 ಬಾರಿ ಉಚಿತ ಕಣ್ಣಿನ ತಪಾಸಣೆ ಮಾಡಲಾಗಿದೆ, ಬಡ ಜನರ ಬದುಕಿಗೆ ಮಂಜುನಾಥ ಶಿವಪ್ಪ ಮಕ್ಕಳಗೇರಿ ಅವರು ದಾರಿದೀಪವಾಗಿ ಸೇವೆ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Tags:

error: Content is protected !!