Accident

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯನ ಆರ್ಭಟ, ಕೆರೆಯಂತಾದ ಎಚ್‌ಡಿ ಬಿಆರ್‌ಟಿಎಸ್ ರಸ್ತೆ…. ಮಳೆ ನೀರಿನಿಂದ ತುಬಿದ ರಸ್ತೆಯಲ್ಲಿ ಸಾಗಲು ವಾಹನ ಸವಾರರ ಪರದಾಟ.

Share

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯನ ಆರ್ಭಟ, ಕೆರೆಯಂತಾದ ಎಚ್‌ಡಿ ಬಿಆರ್‌ಟಿಎಸ್ ರಸ್ತೆ…. ಮಳೆ ನೀರಿನಿಂದ ತುಬಿದ ರಸ್ತೆಯಲ್ಲಿ ಸಾಗಲು ವಾಹನ ಸವಾರರ ಪರದಾಟ.

ಪೇಡಾ ನಗರಿ‌ ಧಾರವಾಡದ ಹಾಗೂ ವಾಣಿಜ್ಯಮಗರಿ ಹುಬ್ಬಳ್ಳಿಯಲ್ಲಿ‌ ಏಕಕಾಲಕ್ಕೆ ಸುಮಾರು ಎರಡು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಹೆಚ್‌ಡಿ‌ ಬಿಆರ್‌ಟಿ‌ಎಸ್ ರಸ್ತೆ ಜಲಾವೃತಗೊಂಡು ವಾಹನ‌ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ಧಾರವಾಡದ ಟೋಲನಾಕಾ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ‌ಸವಾರರು ಪರದಾಡಿದರು. ಪ್ರತಿ ಬಾರಿ ಮಳೆದಾಗ್ಲೇಲ್ಲ ಟೋಲನಾಕ ಬಳಿ ರಸ್ತೆ ಜಾಲವೃತಗೊಳ್ಳತ್ತಲೇದಿದ್ದು, ಸ್ಥಳೀಯರು ಹೆಚ್ ಡಿ ಬಿಆರ್‌ಟಿಎಸ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲೂ ವರುಣರಾಯನ ಅರ್ಭ ಜೋರಾಗಿದ್ದು, ಬೈರಿ ದೇವರಕೊಪ್ಪ ಹಾಗೂ ಉಣಕಲ್ ಕೆರೆಯ ಬಳಿಯು ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ‌ ಸವಾರರು ಪರದಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿನಗರ ರಸ್ತೆಗಳ ಜಲಾವೃತಕ್ಕೆ ಬಿಆರ್‌ಟಿಎಸ್ ಅವೈಜ್ಞಾನಿಕ ಕಾಮಗಾರಿಯೆ ಕಾರಣವೆಂದು ಅವಳಿ ನಗರದ ಜನತೆ ಆಕ್ರೋಶಗೊಂಡಿದ್ದಾರೆ. ಇನ್ನೂ ಹುಬ್ಬಳ್ಳಿ ಧಾರವಾಡದಲ್ಲಿ ಸಂಜೆ ಹೊತ್ತಿಗೆ ಏಕಕಾಲಕ್ಕೆ ಸುರಿಯಲಾರಂಭಿಸಿದ ಮಳೆ, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಿಟ್ಟೂಬಿಡದೇ ಧಾರಾಕಾರವಾಗಿ ಮಳೆಯಾಗಿದೆ. ಸಂಹೆ ಸಮಯ ಹಿನ್ನೆಲೆಯಲ್ಲಿ ವರುಣನ ಅರ್ಭಟಕ್ಕೆ ವಾಹನ ಸವಾರರು ಪರದಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Tags:

error: Content is protected !!