Chikkodi

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ,ಚಿಕ್ಕೋಡಿಯಲ್ಲಿ ‌ಬೃಹತ್ ತಿರಂಗಾ ರ್ಯಾಲಿ

Share

ಚಿಕ್ಕೋಡಿ: ಪಹಲಾಗಮ್ ಉಗ್ರರ ದಾಳಿಗೆ ಪ್ರತಿಯಾಗಿ,ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಬೃಹತ್ ತಿರಂಗಾ ರ್ಯಾಲಿ ನಡೆಯಿತು.

ತಿರಂಗಾ ರ್ಯಾಲಿಯ‌ ಮೂಲಕ ಸೇನೆಗೆ ಬೆಂಬಲವನ್ನು ಸೂಚಿಸಲಾಯಿತು.ಸಾವಿರ ಮೀಟರ್ ಉದ್ದದ ರಾಷ್ಟ್ರ ಧ್ವಜ ಹಿಡಿದು ಚಿಕ್ಕೋಡಿ ಪಟ್ಟಣದಾದ್ಯಂದತ ಮೇರವಣಿಗೆ ನಡೆಯಿತು.ತಿರಂಗಾ ರ್ಯಾಲಿಯು ಆರ್.ಡಿ.ಕಾಲೇಜು‌ ಮೈದಾನದಿಂದ ಗಾಂಧಿ ಕಟ್ಟೆಯ ವರೆಗೆ ಜರುಗಿತು.

ಈ ಸಂಧರ್ಭದಲ್ಲಿ ಸಂಪದನಾ ಸ್ವಾಮೀಜಿ,ವೀರಭದ್ರೇಶ್ವರ ಸ್ವಾಮೀಜಿ,ಶೃಧ್ದಾನಂದಾ ಸ್ವಾಮೀಜಿ,ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,ಶಾಸಕರಾದ ದುರ್ಯೋಧನ ಐಹೊಳೆ,ಶಶಿಕಲಾ ಜೊಲ್ಲೆ, ನಿಖೀಲ ಕತ್ತಿ,ಮಹಾಂತೇಶ ‌ಕವಟಗಿಮಠ ಸೇರಿದಂತೆ ವಿವಿಧ ಮಠಾಧೀಶರು,ಮಾಜಿ ಸೈನಿಕರು ,ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Tags:

error: Content is protected !!