Kagawad

ಆಲಮಟ್ಟಿ ಡ್ಯಾಮನ ಹಿನ್ನೀರಿನಿಂದ ಮಹಾರಾಷ್ಟ್ರದ ಕೃಷ್ಣಾ ನದಿಗೆ ಮಹಾಪೂರ ; ಮಹಾರಾಷ್ಟ್ರದ ರೈತರ ಆರೋಪ ಸತ್ಯಕ್ಕೆ ದೂರ;ಶಾಸಕ ರಾಜು ಕಾಗೆ

Share

ಕಾಗವಾಡ: ಆಲಮಟ್ಟಿ ಅಣೆಕಟ್ಟಿನಿಂದ ಕೃಷ್ಣಾ ನದಿಯ ಹಿನ್ನೀರಿನಿಂದ ಮಹಾರಾಷ್ಟ್ರದ ಜಿಲ್ಲೆಗಳು ಜಲಾವೃತಗೊಳ್ಳುತ್ತಿವೆ, ಎಂಬ ಮಹಾರಾಷ್ಟ್ರ ರಾಜ್ಯದಿಂದ ಕೆಲ ರೈತರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು. ಸೋಮವಾರ ರಂದು ಶಾಸಕರ ಉಗಾರದ ಪ್ರಧಾನ ಕಚೇರಿಯಲ್ಲಿ ಇನ್ ವಾಹಿನಿ ದೊಂದಿಗೆ ಮಾತನಾಡುವಾಗ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಕೆಲ ರೈತರು, ರಾಜಕೀಯ ಮುಖಂಡರು ಕರ್ನಾಟಕದ ಆಲಮಟ್ಟಿ ಅಣೆಕಟ್ಟಿನ ಮಹಾಪೂರ ನೀರಿನ ಸಮಸ್ಯೆನಮ್ಮ ರೈತರಿಗೆ ಆಗುತ್ತಿದೆ ಎಂದು ಮಾಡುತ್ತಿರುವ ಆರೋಪ ಸಂಪೂರ್ಣವಾಗಿ ತಪ್ಪು ಇದೆ. ಕೃಷ್ಣಾ ನದಿ ಅನೇಕ ವರ್ಷಗಳಿಂದ ಮಹಾರಾಷ್ಟ್ರ-ಕರ್ನಾಟಕ ಹಾಗೂ ಆಂಧ್ರ ರಾಜ್ಯದಲ್ಲಿ ಹರಿದು ಹೋಗುತ್ತದೆ. ಆದರೆ ಪ್ರತಿ ವರ್ಷ ಮಹಾಪೂರ ಬಂದು ಮಹಾರಾಷ್ಟ್ರ ರಾಜ್ಯದಲ್ಲಿ ಅನೇಕ ಜಿಲ್ಲೆಗಳು ಜಲಾವೃತಗೊಳ್ಳುತ್ತಿವೆ ಎಂದು ಹೇಳುವುದು ಅಷ್ಟೇನೂ ಸರಿಯಲ್ಲ ಕಾರಣ ಸನ ೨೦೦೫, ೨೦೦೬, ಈ ವರ್ಷಗಳ ನಂತರ ೨೦೧೯ ರಲ್ಲಿ, ೨೦೨೦ರಲ್ಲಿ ಮಹಾಪೂರ ನೀರಿನ ಸಮಸ್ಯೆ ಆಗಿದೆ.

ಆಗ ಕಾಗವಾಡ ತಾಲೂಕಿನ ಜುಗುಳು, ಶಹಾಪುರ, ಮಂಗಾವತಿ, ಮೊಳವಾಡ, ಕುಸನಾಳ ಈ ನದಿ ತೀರದ ಗ್ರಾಮಗಳಲ್ಲಿಯ ಜನರನ್ನು, ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ, ಅದೇ ವರ್ಷಿನಲ್ಲಿ ಕೋಲಾಪುರ್ ಹಾಗೂ ಸಾಂಗ್ಲಿ ಜಿಲ್ಲೆಯ ಜಲಾವೃತ್ತುಗೊಂಡ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಮಹಾಪೂರ ನೀರಿನ ಸಮಸ್ಯೆ ನಿರ್ಮಾಣಗೊಂಡಿಲ್ಲಾ. ಏಕಕಾಲಕ್ಕೆ ಅಧಿಕ ಮಳೆ ಸುರಿಯುತ್ತಿದ್ದರಿಂದ ನದಿ ಪಾತ್ರದಲ್ಲಿ ನೀರಿನ ಸಂಗ್ರಹ ಹೆಚ್ಚಿಸಿದರಿಂದ ಮಹಾರ್ಪೂ ಸಮಸ್ಯೆ ಬಂದಿದೆ.

ಮಳೆ ಪ್ರಮಾಣ ಕಡಿಮೆಯಾದಲ್ಲಿ ಮಹಾಪೂರ ಬಂದೇ ಇಲ್ಲ ಇದನ್ನು ಮಹಾರಾಷ್ಟ್ರ ರಾಜ್ಯದ ರೈತರು, ಅಧಿಕಾರಿಗಳು ತಿಳಿದುಕೊಳ್ಳಬೇಕು.
ಆಲಮಟ್ಟಿ ಅಣೆಕಟ್ಟಿನ ಹಿನ್ನಿರಿನ ಸಮಸ್ಯೆ ಮಹಾರಾಷ್ಟ್ರಕ್ಕೆ ಬರೋದೇ ಇಲ್ಲ ಇದರ ಮಧ್ಯದಲ್ಲಿ ಹಿಪ್ಪರಿಗಿ ಅಣೆಕಟ್ಟು ಇದೆ. ಆಲಮಟ್ಟಿ ಡ್ಯಾಮ್ ಹಿನ್ನೀರು ಕಾಗವಾಡ ತಾಲೂಕಿನವರೆಗೆ ನಿಲ್ಲುಗಡೆವಾಗುತ್ತಿದ್ದರೆ ಹಿಪ್ಪರಗಿ ಡ್ಯಾಮ್ ಕಟ್ಟುವ ಅವಶಕ್ತಿ ಇರಲಿಲ್ಲ. ಇದನ್ನೆಲ್ಲ ಗಮನದಲ್ಲಿ ತೆಗೆದುಕೊಂಡು ಡ್ಯಾಮ್ ನಿರ್ಮಿಸಿದ್ದಾರೆ.
ಮಹಾರಾಷ್ಟ್ರದ ಕೆಲತಜ್ಞ ರೈತರು, ಅಧಿಕಾರಿಗಳು, ಅಭಿಯಂತರು ಆಲಮಟ್ಟಿ ವರಿಗೆ ಬಂದು ಈ ಹಿನೀರಿನ ಸಮಸ್ಯೆ ಬರುತ್ತಿದೆ ಎನ್ನು ಈ ಬಗ್ಗೆ ಕುಲಂಕುಶ ಅಧ್ಯಯನ ಮಾಡಿ ಮಾತನಾಡಿರಿ.

ನಿಮ್ಮ ಅಧ್ಯಯನದಲ್ಲಿ ಆಲಮಟ್ಟಿ ನೀರಿನಿಂದ ಸಮಸ್ಯೆವಾಗುತ್ತಿರುವ ಮಾಹಿತಿ ಸತ್ಯವಾದರೆ ನಮ್ಮ ಹೇಳಿಕೆಯಿಂದ ನಾವು ಹಿಂದಕ್ಕೆ ಸರಿದು ನಿಮ್ಮ ಬೇಡಿಕೆಗಳ ಬಗ್ಗೆ ಇಲ್ಲಿಯ ಅಭಿಯಂತರು ವಿಚಾರ ವಿನಿಮಯ ಮಾಡಲಿದ್ದಾರೆ. ಕೇವಲ ರಾಜಕೀಯ ಉದ್ದೇಶಗಳು ಇಟ್ಟು ಆರೋಪಿಸೀವದು ತಪ್ಪು ಎಂದು ಶಾಸಕ ರಾಜು ಕಾಗೆ ಹೇಳಿದರು.

ಸುಕುಮಾರ್ ಬನ್ನೂರೆ
ಇನ ನ್ಯೂಸ್ ಕಾಗವಾಡ

Tags:

error: Content is protected !!