ಕಾಗವಾಡ ತಾಲೂಕಿನ ಐನಾಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶ್ರೀಮತಿ ಸರೋಜಿನಿ ಸುರೇಶ ಗಾಣಿಗೇರ ಇವರು ತಮ್ಮ ಪದಕ್ಕೆ ರಾಜೀನಾಮೆ ನೀಡಿದ ನಿಮಿತ್ಯ ತೆರುವುಗೋಂಡ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂಬರ್ 15ನೇ ಸದಸ್ಯರಾದ ಶ್ರೀಮತಿ ಕಸ್ತೂರಿ ರಾವಸಾಹೇಬ ಮಡಿವಾಳರ ಇವರನ್ನು ಅವಿರುದ್ಧವಾಗಿ ಕಾಗವಾಡ ತಹಸಿಲ್ದಾರ ರಾಜೇಶ ಬುರ್ಲಿ ಇವರ ನೇತೃತ್ವದಲ್ಲಿ ಆಯ್ಕೆ ಮಾಡಿದರು.
ಸೋಮವಾರ ದಂದು ಬೆಳಗ್ಗೆ ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು. ಐನಾಪುರ ಪಟ್ಟಣ ಪಂಚಾಯಿತಿಯಲ್ಲಿ 19 ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್ ಪಕ್ಷದಿಂದ 13 ಸದಸ್ಯರು ಆಯ್ಕೆಗೊಂಡಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಸದ್ಯಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತ ಇದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯ ಸಂಜಯ್ ಬಿರಡಿ ಇವರು ಅಧ್ಯಕ್ಷರ ಹೆಸರು ಸೂಚಿಸಿದರು ಇದಕ್ಕೆ ಪ್ರವೀಣ ಗಾಣಿಗೇರ ಅನುಮೋದಿಸಿದರು. ತಹಸಿಲ್ದಾರ ರಾಜೇಶ್ ಬುರ್ಲಿ ಇವರು ಚುನಾವಣಾ ಅಧಿಕಾರಿ ಎಂದು ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರನ್ನು ಎಲ್ಲ ಸದಸ್ಯರು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹಾನತೇಶ ಕೌಲಾಪುರ ಇವರು ಅಭಿನಂದಿಸಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ ಗಾಣಿಗೇರ ಮಾತನಾಡಿ ಅಧ್ಯಕ್ಷರಾಗಿ ಶ್ರೀಮತಿ ಕಸ್ತೂರಿ ರಾವಸಾಹೇಬ ಮಡಿವಾಳರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು. ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಒಂದುಗೂಡಿ ಶ್ರಮಿಸುತ್ತೇವೆ ಎಂದು ಹೇಳಿದರು.
ಆಯ್ಕೆ ಪ್ರಕ್ರಿಯೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಶ್ರೀಮತಿ ರತ್ನವಾ ಸದಾಶಿವ ಮಾದರ, ನಿಕಟ ಪೂರ್ವ ಅಧ್ಯಕ್ಷ ಸರೋಜಿನಿ ಸುರೇಶ ಗಾಣಿಗೇರ, ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಬಿರಡಿ, ನ್ಯಾಯವಾದಿ ಸಂಜಯ ಕುತುನೂರೆ, ಅರುಣ ಗಾಣಿಗೇರ, ದಾದಾ ಜಂತನವರ, ದರ್ಯಪ್ಪ ಹರಳೆ, ರಾಜು ಹರಳೆ, ಸುರೇಶ ಅಡಿಸೇರಿ, ಪ್ರಕಾಶ ನಾಯಿಕ, ಶ್ರೀಮತಿ ಲಕ್ಷ್ಮಿಬಾಯಿ ಸುರೇಶ ಅಡಿ ಸೇರಿ, ವಿಜಯ ಹರಳೆ ಇಸಾಕ ರಾವತ, ಸಂಜಯ ಕುಸನಾಳೆ, ಸೇರಿದಂತೆ ಇನ್ನುಳಿದ ಸದಸ್ಯರು ಗಣ್ಯರು ಪಾಲ್ಗೊಂಡಿದ್ದರು.
ಮಡಿವಾಳರ ಸಮಾಜದಲ್ಲಿ ಕಾಗವಾಡ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ಸೌಭಾಗ್ಯ ಒದಗಿ ಬಂದಿದ್ದರಿಂದ ಸಮಾಜದ ವತಿಯಿಂದ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಈ ವೇಳೆ ರಾವಸಾಹೇಬ ಮಡಿವಾಳರ, ಸುಪುತ್ರರಾದ ಗುರುರಾಜ ಮಡಿವಾಳರ, ಗಿರೀಶ ಮಡಿವಾಳರ ಹಾಗೂ ಸೋಶಿಯಂದರು ಮೊಮ್ಮಕ್ಕಳು ಸಮಾಜದ ಬಾಂಧವರು ಸನ್ಮಾನಿಸಿ ಅಭಿನಂದಿಸಿದರು.
ಗುರುರಾಜ ಮಡಿವಾಳರ ಮಾತನಾಡಿ ನಮ್ಮ ಸಮಾಜಕ್ಕೆ ಪ್ರಥಮ ಬಾರಿಗೆ ಈ ಅವಕಾಶ ದೊರತಿದೆ. ಅವಕಾಶ ದೊರೆಯಲು ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ನ್ಯಾಯವಾದಿ ಸಂಜಯ ಕುಚುನೂರೆ, ದಾದಾ ಜಂತನವರ, ಸೇರಿದಂತೆ ಎಲ್ಲ ಸದಸ್ಯರು ಸಹಕರಿಸಿದ್ದಾರೆ. ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.
ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ