ಜೊಲ್ಲೆ ಗ್ರುಪ್ ಅಂಗಸಂಸ್ಥೆಗಳು ಕೇವಲ ಆರ್ಥಿಕಾಭಿವೃಧ್ಧಿ ಸಂಸ್ಥೆಯಾಗದೇ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತೀಕ, ಕೃಷಿ ಚುಟುವಟಿಕೆಗಳೊಂದಿದೆ ನಾಡಿನ ಜನರ ವಿಶ್ವಾಸ ಗಳಿಸಿದೆ. ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಹ ಸಂಸ್ಥಾಪಕರಾದ ಶಶಿಕಲಾ ಜೊಲ್ಲೆ ಅವರ ಮಾರ್ಗದರ್ಶನ, ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಜೊಲ್ಲೆ ಗ್ರುಪ್ ಸಂಸ್ಥೆಗಳಿಂದ ಅನೇಕ ಯೋಜನೆಗಳನ್ನು ವಿಸ್ತರಿಸುವ ಗುರಿಹೊಂದಿದೆ. ಸರ್ವ ರಂಗದಲ್ಲಿ ಸಾಧನೆ ಮಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಕುರೀತು ಪುಸ್ತಕವನ್ನು ಮುಂಬರುವ ವರ್ಷದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಯುವಧುರೀಣರಾದ ಬಸವಪ್ರಸಾದ ಜೊಲ್ಲೆ ಹೇಳಿದರು.
ಅವರು ಶನಿವಾರರಂದು ತಾಲೂಕಿನ ಯಕ್ಸಂಬಾದ ಸಿಬಿಎಸ್ಸಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಜೊಲ್ಲೆ ಗ್ರುಪ್ ಸಂಸ್ಥೆಗಳ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಟಿಯ ೩೫ ನೇ ವಾರ್ಷಿಕ ಸಭೆ ಸೇರಿದಂತೆ ಸಹ ಸಂಸ್ಥೆಗಳಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ೩೧ ನೇ, ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದ ೩೨ ನೇ, ಜೊಲ್ಲೆ ಎಜ್ಯುಕೇಶನ್ ಸೊಸಾಯಟಿಯ ೩೦ ನೇ, ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ೧೮ ನೇ, ಲೋಕ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ೧೪ ನೇ ಸೇರಿದಂತೆ ವಿವಿಧ ಅಂಗಸಂಸ್ಥೆಗಳ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವವನ್ನುವಹಿಸಿಕೊಂಡಿದ್ದ ಜೊಲ್ಲೆ ಗ್ರುಪ್ ಸಂಸ್ಥೆಗಳ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಅನೇಕ ಯೋಜನೆಗಳ ಮೂಲಕ ಜೊಲ್ಲೆ ಗ್ರುಪ್ ಕಾರ್ಯೋನ್ಮುಖವಾಗಿದೆ. ಮಲ್ಟಿಸ್ಟೇಟ್ ಕಾಯ್ದೆಯಡಿ ಶ್ರೀ ಬೀರೇಶ್ವರ ಸಹಕಾರಿ ಸಂಸ್ಥೆಯ ಶಾಖೆಗಳನ್ನು ಕರ್ನಾಟಕ ರಾಜ್ಯ ಸೇರಿದಂತೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಸುಮಾರು ೨೨೬ ಶಾಖೆಗಳನ್ನು ವಿಸ್ತರಿಸಿದೆ.
ಶಿಘ್ರದಲ್ಲಿ ನೂತನ ಶಾಖೆಗಳನ್ನು ಸಹ ಪ್ರಾರಂಭಿಸಲಾಗುತ್ತಿದೆ ಅದೇ ರೀತಿಯಾಗಿ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ಶಾಖೆಗಳನ್ನು ವಿಸ್ತರಿಸಿ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಮಹತ್ತರ ಕಾರ್ಯವಾಗಿದೆ ಎಂದರು.
ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಮಾತನಾಡಿ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಬಹುದೊಡ್ಡ ಅನುಕೂಲ ಒದಗಿಸಬಲ್ಲದು ಎಂಬುದಕ್ಕೆ ಶ್ರೀ ಬೀರೇಶ್ವರ ಹಾಗೂ ಜ್ಯೋತಿ ಸಹಕಾರಿ ಸೇರಿದಂತೆ ಜೊಲ್ಲೆ ಗ್ರುಪ್ನ ಎಲ್ಲ ಸಂಸ್ಥೆಗಳು ಉತ್ತಮ ನಿದರ್ಶನವಾಗಿವೆ. ಇದಕ್ಕೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಇವರ ದೂರದೃಷ್ಠಿಯೇ ಕಾರಣ ಎಂದರು.

ಅತಿಥಿಗಳಾದ ಮಹಾರಾಷ್ಟ್ರದ ಮಾಜಿ ಶಾಸಕ ದೀಪಕ ಸಾಳುಂಕೆ ಪಾಟೀಲ, ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ, ಲೇಖಕ ಸುಶಾಂತ ಗಾವಕರ ಮಾತನಾಡಿ ಜೊಲ್ಲೆ ಸಂಸ್ಥೆಗಳ ಬಗ್ಗೆ ಪ್ರಶಂಸೆವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಅನೇಕ ಗಣ್ಯರಿಗೆ, ಶ್ರೀ ಬೀರೇಶ್ವರ ಹಾಗೂ ಜ್ಯೋತಿ ಸಹಕಾರಿ ಸಂಸ್ಥೆಗಳ ಉತ್ತಮ ಶಾಖೆಗಳಿಗೆ, ಜೊಲ್ಲೆ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ, ನಿವೃತ್ತಿ ಹೊಂದಿದ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ಅದೇ ರೀತಿಯಾಗಿ ಸಂಸ್ಥೆಯ ಅಕಾಲಿಕ ಮರಣಹೊಂದಿದ ಗ್ರಾಹಕ ಸದಸ್ಯರ ವಾರಸುದಾರರಿಗೆ, ಸಿಬ್ಬಂದಿಗಳ ವಾರಸುದಾರರಿಗೆ ಪರಿಹಾರ ಚೆಕ್ ಹಾಗೂ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಪೆನ್ಸöನ್ ಪತ್ರಗಳನ್ನು ನೀಡಲಾಯಿತು.
ವೇದಿಕೆ ಮೇಲೆ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬೀರೇಶ್ವರ ಸಹಕಾರಿ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿಪ್ಪಾಣಿ ಹಾಲಸಿಧ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ, ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೇಶಕರು, ಅಧಿಕಾರಿಗಳಾದ ಬಿ.ಎ.ಗುರವ, ಎಂ.ಕೆ.ಗಾವತೆ, ರಮೇಶ ಕುಂಬಾರ, ಎಸ್.ಕೆ.ಮಾನೆ, ಶಿವಪುತ್ರ ಡಬ್ಬ, ಸಂತೋಷ ಪಾಟಿಲ, ಹಸನ ನಾಯಿಕವಾಡಿ, ಎಂ.ಎಂ,ಪಾಟೀಲ ಸೇರಿದಂತೆ ಜೊಲ್ಲೆ ಗ್ರುಪ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖ್ಯಸ್ಥರು, ಸಲಹಾ ಸಮಿತಿ ಸದಸ್ಯರು, ಗ್ರಾಮಸ್ಥರು, ಸಂಘದ ಸದಸ್ಯರು ಉಪಸ್ಥಿತರಿದ್ದರು.