ಬಾಗಲಕೋಟೆ ಜಿಲ್ಲೆಯ ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟ್ ಗಳ ಜನರಿಗೆ ಸರ್ಕಾರ ನೀಡಿದ ವಸತಿ ಹಕ್ಕು ಪತ್ರಗಳು ನಕಲಿ ಎಂದು ಅಧಿಕಾರಿಗಳು ಹೇಳಿದ್ದರಿಂದ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು ಜನರ ಬದುಕು ಈಗ ಅಯೋಮಯವಾಗಿದೆ.
ಬಾಗಲಕೋಟೆ ಜಿಲ್ಲೆ ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟ ನಿವಾಸಿಗಳಿಗೆ ಸರ್ಕಾರ 1992ರಿಂದ 2007ರವರೆಗೆ 108 ಕುಟುಂಬಗಳಿಗೆ ವಸತಿ ಹಕ್ಕುಪತ್ರಗಳನ್ನು ಜಮಖಂಡಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ವಿತರಿಸಿದೆ. ಆದ್ರೆ ಸಧ್ಯ ಆ ಹಕ್ಕುಪತ್ರಗಳಿಗೆ ಮಾನ್ಯತೆ ಇಲ್ಲ ಅಂತಿರೋ ಅಧಿಕಾರಿಗಳು.
ಸಧ್ಯ ಕಟ್ಟಿಸಿದ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು ಕುಟುಂಬಗಳು ಅತಂತ್ರವಾಗಿವೆ ಹೀಗಾಗಿ ರಿಪೇರಿ ಸೇರಿ ವಿವಿಧ ಸೌಲಭ್ಯಗಳಿಗೆ ಪರ್ಮಿಷನ್ ಕೇಳೋಕೆ ಹೋದ್ರೆ
ಈ ಹಿಂದೆ ನೀಡಿದ ಹಕ್ಕುಪತ್ರಗಳೇ ಡೂಪ್ಲಿಕೇಟ್ ಅಂತಿದ್ದಾರಂತೆ ಪಿಡಿಓ.

ಹೀಗಾಗಿ ಈ ಸ್ವತ್ತು ಮಾಡಿಕೊಳ್ಳೋಕೂ ಆಗುತ್ತಿಲ್ಲ ಕಾಲೋನಿಗೆ ಸಮರ್ಪಕ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಕೊಣ್ಣೂರ ತಾಪಂ ಇಓ ಎಸ್.ಆರ್.ಬಿರಾದಾರ ವಿರುದ್ಧಹೋರಾಟಕ್ಕಿಳಿದಿದ್ದಾರೆ. ನೂರಾರು ಜನರೊಂದಿಗೆ ಏಕಕಾಲಕ್ಕೆ ಬಾಗಲಕೋಟೆ ಜಿಲ್ಲಾಡಳಿತ ಕಚೇರಿಗೆ ಆಗಮಿಸಿದ ಕೊಣ್ಣೂರ ಮಡ್ಡಿ ಪ್ಲಾಟ್ ನ ಕುಟುಂಬಗಳ ನಿವಾಸಿಗಳು ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯಿತಿ ತೆರಿಗೆ ತುಂಬಿಸಿಕೊಳ್ಳುತ್ತಿದ್ದು ಆದ್ರೆ ಸೌಲಭ್ಯ ಮಾತ್ರ ಕೇಳಬೇಡಿ ಅಂತಾರೆ ಎಂದು ಕಿಡಿ ಕಾರಿದರು. ಪ್ರತಿ ಬಾರಿ ಓಟ್ ಕೇಳೋಕೆ ಬರ್ತಾರೆ ಆದ್ರೆ ಸೌಲಭ್ಯ ಮಾತ್ರ ಏನೂ ಕೇಳಬೇಡಿ ಅಂತಾರೆ ಎಂದು ಜನಪ್ರತಿನಿಧಿಗಳ ವಿರುದ್ಧವೂ ಮಹಿಳೆಯರು ಆಕ್ರೋಶ ಹೊರ ಹಾಕಿ ನಮಗೆ ನ್ಯಾಯ ಕೊಡಿಸಬೇಕು ಶೀಘ್ರವೇ ಸಮಸ್ಯೆ ಬಿಗಿ ಹರಿಸದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ ಅವರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.