Kagawad

ಐನಾಪುರ ಪಟ್ಟಣದಲ್ಲಿ ರಾಷ್ಟ್ರಸಂತ ಗುಣಧರನಂದಿ ಮುನಿ ಮಹಾರಾಜರ ಅದ್ಧೂರಿ ಸ್ವಾಗತ

Share

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಜೈನ ಸಮಾಜದ ಬೃಹತ ಸಮಾವೇಶ ಬರುವ ಜೂನ ತಿಂಗಳಿನ ಶುಕ್ರವಾರ .6 ರಿಂದ ರವಿವಾರ ದಿನಾಂಕ 8 ರವರೆಗೆ ರಾಷ್ಟ್ರಸಂತ 108 ಗುಣದಾರನಂದಿ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ನಿಮಿತ್ಯ ಗುಣದರನಂದಿ ಮುನಿ ಮಹಾರಾಜರು ಮಂಗಳವಾರ ಸಂಜೆ ಐನಾಪುರ ಪಟ್ಟಣಕ್ಕೆ ಆಗಮಿಸಿದರು ಅವರನ್ನು ಸಮಸ್ತ ಜೈನ ಸಮಾಜ ವತಿಯಿಂದ ಅದ್ದೂರಿ ವಾಗಿ ಭಕ್ತಿಯಿಂದ ಸ್ವಾಗತಿಸಿ ಬರಮಾಡಿಕೊಂಡರು.

ಮಂಗಳವಾರ ರಂದು ರಾಷ್ಟ್ರಸಂತ ಗುಣಧರನಂದಿ ಮುನಿ ಮಹಾರಾಜರು. ಉಗಾರ ಮಾರ್ಗದ ಮುಖಾಂತರ ಐನಾಪುರಕ್ಕೆ ಸಂಜೆ ಆಗಮಿಸಿದರು. ಐನಾಪುರ್ ಪಟ್ಟಣದ ಸಮಸ್ತ ಜೈನ ಸಮಾಜದ ಶ್ರಾವಕರು ಭಕ್ತಿಯಿಂದ ಬರಮಾಡಿಕೊಂಡರು. ಐನಾಪುರ ಜೈನ ಸಮಾಜದ ಮುಖಂಡರಾದ ದಾದಾಗೌಡ ಪಾಟೀಲ ಮಾತನಾಡಿ ಜೂನ ತಿಂಗಳಲ್ಲಿ ಐನಾಪುರದಲ್ಲಿ ಜರುಗುವ ಜೈನ ಸಮಾಜದ ಬೃಹತ ಸಮಾವೇಶಕ್ಕಾಗಿ ರಾಜ್ಯದ ರಾಜ್ಯಪಾಲರು ಹಾಗೂ ಜೈನ ಸಮಾಜದ ಭಟ್ಟಾರಕ ಮಹಾರಾಜರು, ಮುನಿ ಮಹಾರಾಜರು, ಸಮಾಜದ ಹಿರಿಯರು ಸುಮಾರು ಒಂದು ಲಕ್ಷ ಕ್ಕಿಂತ ಮೇಲ್ಪಟ್ಟು ಸಮಾಜ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಬೇರೆ ಬೇರೆ ಸಮಾಜಕ್ಕಾಗಿ ಸರ್ಕಾರ ಸ್ವತಂತ್ರ ನಿಗಮಗಳು ಸ್ಥಾಪನೆ ಮಾಡಿ ಸಮಾಜದ ಅಭಿವೃದ್ಧಿಗಾಗಿ ಎಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಜೈನ ಸಮಾಜದ ಸ್ವತಂತ್ರವಾಗಿ ನಿಗಮ ಮಂಡಳಿ ಸ್ಥಾಪನೆ ಮಾಡಲು ಆ ದಿನ ರಾಜ್ಯದ ರಾಜ್ಯಪಾಲರಿಗೆ ರಾಜ್ಯದ ಮುಖಂಡರಿಗೆ ಮನವಿ ಅರ್ಪಿಸಿ ಕೇಳಿಕೊಳ್ಳಲಾಗುತ್ತಿದೆ ಎಂದು ದಾದಾಗೌಡ ಪಾಟೀಲ ಹೇಳಿದರು.

ಆದಿನಾಥ್ ದಿಗಂಬರ ಜೈನ ಮಂದಿರದ ಅರ್ಚಕರಾದ ಮಹೇಂದ್ರ ಉಪಾಧ್ಯ ಮಾತನಾಡಿ ಬರುವ ಜೀವನ ತಿಂಗಳಿನ ದಿನಾಂಕ 6 ರಿಂದ 8ರವರೆಗೆ ಬೃಹತ್ ಜೈನ ಸಮಾಜ ಸಮಾವೇಶ ಕಾರ್ಯಕ್ರಮ ಹಾಗೂ ಭಟ್ಟರಕ ಸಮ್ಮೇಳನ ಕಾರ್ಯಕ್ರಮ ನೆರವೇರಲಿದೆ. ಈ ಭವ್ಯ ಸಮಾರಂಭಕ್ಕಾಗಿ ರಾಜ್ಯದ ರಾಜ್ಯಪಾಲರಾದ ತಾವರ ಚೆಂದ ಗೆಹಿಲೋಟ ಮತ್ತು ಜೇನು ಸಮಾಜದ ಮುಖಂಡರು ಪಾಲ್ಗೊಳಿಸಿದ್ದಾರೆ. ಸುಮಾರು ಒಂದು ಲಕ್ಷ ಜೈನ್ಸ್ ರಾವಕಸ್ರಾವಿಕೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ ಉಪಾಧ್ಯಕ್ಷ ಶೀತಲಗೌಡಾ ಪಾಟೀಲ ಮಾತನಾಡಿ ಐನಾಪುರದಲ್ಲಿ ಜರುಗುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಇಡೀ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಮಾಜದ ಹಿರಿಯರು ಪಾಲ್ಗೊಳ್ಳಲಿದ್ದಾರೆ. ಜೈನ ಸಮಾಜದ ಓರ್ವ ಪ್ರತಿನಿಧಿಗಾಗಿ ಈ ಭವ್ಯ ಸಮಾರಂಭಕ್ಕೆ ಎಲ್ಲ ಸಮಾಜ ಬಾಂಧವರು ಒಂದುಗೂಡಿ ಸಮಾರಂಭ ಯಶಸ್ವಿಗೊಳಿಸಲು ಸಹಕರಿಸಿರಿ ಎಂದು ಕರೆ ನೀಡಿದರು.

ಉಗಾರ ಪಟ್ಟಣದ ಎಲ್ಲ ಸಮಾಜ ಬಾಂಧವರು ಒಂದುಗೂಡಿ ಸ್ವಾಮೀಜಿ ಇವರನ್ನು ಅದ್ದೂರಿಯಿಂದ ಸ್ವಾಗತಿಸಿ ಪಾದ ಪೂಜೆ ನೆರವೇರಿಸಿ ಐನಾಪುರ ಪಟ್ಟಣದ ಪ್ರಯಾಣಿಕ್ಕಾಗಿ ಬಿಳುಕೊಟ್ಟರು. ಐನಾಪುರದಲ್ಲಿ ಸಮಸ್ತ ಜೈನ ಸಮಾಜದ ಬಾಂಧವರು, ಮಹಿಳಾ ಸ್ರಾವಿಕೆಯರು ಬಸ್ ನಿಲ್ದಾಣದಿಂದ ಭಗವಾನ್ ಆದಿನಾಥ ಮಂದಿರವರಿಗೆ ಭಕ್ತಿಯಿಂದ ಬರಮಾಡಿಕೊಂಡರು. ಮಾರ್ಗದ ಉದ್ದಕ್ಕೆ ರಂಗೋಲಿ ಬಿಡಿಸಿ ಗುಣದರನಂದಿ ಮುನಿ ಮಹಾರಾಜರಿಗೆ ಜಯವಾಗಲಿ, ಜೈನ ಸಮಾಜಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತ್ತಿದ್ದರು.

ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ

Tags:

error: Content is protected !!