ARMY

ಕರ್ನಲ್ ಸೋಫಿಯಾ ಖುರೇಶಿ ಮಾವನ ಮನೆ, ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿ ನಂಬಬೇಡಿ: ಎಸ್ ಪಿ ಡಾ. ಭೀಮಾಶಂಕರ್ ಗುಳೇದ

Share

ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿರುವ ಕರ್ನಲ್ ಸೋಫಿಯಾ ಕುರೇಶಿ ಅವರ ಮಾವನ ಮನೆಯನ್ನು ಆರ್ ಎಸ್ ಎಸ್ ಹಿಂದುಗಳು ಧ್ವಂಸ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಅನೀಸ್ ಹುದ್ದಿನ ಎಂಬಾತ ಕೆನಡಾದ ವ್ಯಕ್ತಿ ಎಂದು ತಿಳಿದು ಬಂದಿದೆ ಎಂದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್ ಹೇಳಿದರು.


ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ‌ ಫೋಸ್ಟ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಜಿಲ್ಲಾ ಸಾಮಾಜಿಕ ತಾಣ ನಿಯಂತ್ರಣ ಅಧಿಕಾರಿಗಳು ಅದಕ್ಕೆ ಪ್ರತಿಯಾಗಿ ಉತ್ತರ ಕೊಟ್ಟಾಗ ಆ ಪೋಸ್ಟ್ ಡಿಲಿಟ್ ಮಾಡಿದ್ದಾನೆ ಎಂದರು.
ಪ್ರಾಥಮಿಕ ಕೆನಡಾದಿಂದ ಮಾಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ. ನಾವು ಇದು ಸುಳ್ಳು ಎಂದು ಹೇಳಿದಾಗ ಆತ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಈತನ ಬಗ್ಗೆ ಎಕ್ಸ್ ಖಾತೆಯ ಬಗ್ಗೆ ಎಕ್ಸ್ ಖಾತೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಒಂದು ವೇಳೆ ಆತ ಭಾರತದವನಾಗಿದ್ದರೆ ಆತನ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಈಗಾಗಲೇ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಸೋಫಿಯಾ ಕುರೇಶಿ ಅವರ ಮನೆಯಲ್ಲಿ ಸೇನೆಯಲ್ಲಿರುವುದರಿಂದ ಅವರಿಗೆ ಸೂಕ್ಷ್ಮತೆಯ ಬಗ್ಗೆ ಅರಿವು ಇದೆ. ಆದರೂ ಅವರ ಮನೆಯ ಸುತ್ತಮುತ್ತ ಪೊಲೀಸ್ ಭದ್ರತೆ ನೀಡಲಾಗಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಕೋಮು‌ ಗಲಭೆ, ಸಮುದಾಯದ ನಡುವೆ ವಿಷ ಬೀಜ ಬಿತ್ತುವ ಕಿಡಿಗೇಡಿಗಳ ಮೇಲೆ ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣ ಹದ್ದಿನ ಕಣ್ಣಿಟ್ಟಿದೆ ಪೋಸ್ಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದರು.

Tags:

error: Content is protected !!