ಭೀಮಗಡ ವನ್ಯಜೀವಿ ಅರಣ್ಯ ವಲಯ ಹಾಗೂ ಮಲಪ್ರಭಾ ನದಿಯನ್ನು ಸಂರಕ್ಷಿಸಬೇಕೆಂದು ಪರಿಸರವಾದಿಗಳು ಅರಣ್ಯ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ನೀಡಿದ್ದಾರೆ.
ಒಂದು ಕಡೆಯಿಂದ ಹಿಡಕಲ್ ಡ್ಯಾಮ್ ನೀರು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹರಿಯುತ್ತಿದೆ, ಇನ್ನೊಂದು ಕಡೆ ಖಾನಾಪುರದಿಂದ ಎಂಕೆ ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ನೀರು ಒಯ್ಯುತ್ತಿದ್ದಾರೆ ಹಾಗಾದರೆ ನಮ್ಮ ರೈತರು ಜಾನುವಾರುಗಳಿಗೆ ನೀರು ಬೇಡವೇ ಬರುವ ದಿನಗಳಲ್ಲಿ ನೀರಿನ ತುಂಬಾ ಅಭಾವ ಆಗೋದು ಪಕ್ಕಾ ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಹೋರಾಟ ಮಾಡುವ ಅಗತ್ಯವಿದೆಯೆಂದು ಪರಿಸರವಾದಿ ಸಂಘಟನೆಗಳು ಹೋರಾಟ ನಡೆಸಿದ್ದು, ಈ ಕುರಿತು ಧ್ವನಿಯೆತ್ತಿವೆ. ವಿವಿಧ ಕಾಮಗಾರಿಗಳಿಂದ ಹಾಳಾಗುತ್ತಿರುವ ಸಂಪದ್ಬ ರಿತವಾದ ಭೀಮಗಡ ವನ್ಯ ಜೀವಿ ವಲಯವನ್ನು, ಮಲಪ್ರಭಾ ನದಿ ಹಾಗೂ ಉತ್ತರ ಕರ್ನಾಟಕವನ್ನು ಸಂರಕ್ಷಿಸಬೇಕೆಂದು. ಪರಿಸರವಾದಿಗಳ ಸಂಘಟನೆಯಿಂದ ಕರ್ನಲ್ ರವೀಂದ್ರ ಸೈನಿ, ಗೀತಾ ಸಾಹು, ಸುಜಿತ್ ಮುಳುಗುಂದ, ಕ್ಯಾಪ್ಟನ್ ನಿತಿನ್ ಧೊಂಡ, ನೈಲಾ ಕೊಹ್ಲೂ, ನಿಂಗರಾಜ್ ಜಗಜಂಪಿ, ನ್ಯಾಯವಾದಿಗಳಾದ ಸುನಿತಾ ಪಾಟೀಲ್, ನೀತಾಪೋತದಾರ, ಅಮೃತಚರಂತಿಮಠ ಇತರರು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಪತ್ರ ಅರ್ಪಿಸಿದ್ದಾರೆ.
