BELAGAVI

ಬೆಳಗಾವಿ ಪಾಲಿಕೆ ಹಾಗೂ ಸಂಚಾರಿ ಪೊಲೀಸರಿಂದ ಮಾರುಕಟ್ಟೆ ವಿವಿಧ ಭಾಗಗಳಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ

Share

ಬೆಳಗಾವಿಯ ಗಣಪತ ಗಲ್ಲಿ ಸೇರಿದಂತೆ ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಸೋಮವಾರ ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು

ಜನಸಂಖ್ಯೆ ಹೆಚ್ಚಳದಿಂದಾಗಿ ವಾಹನ ದಟ್ಟನೆಯೂ ಅತಿಯಾಗಿದ್ದು, ಸುಗಮ ಸಂಚಾರ ವಾಹನ ಸವಾರರಿಗೆ ಪಾದಚಾರಿಗಳಿಗೆ ದುಃಸ್ತರವಾಗಿದೆ ಈ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಹಲವಾರು ದಿನಗಳಿಂದ ಬೀದಿಬದಿ ಹಾಗೂ ಇನ್ನಿತರ ವ್ಯಾಪಾರಿಗಳಿಂದಾಗುವ ರಸ್ತೆ ಅತಿಕ್ರಮಣಗಳನ್ನು ಸೋಮವಾರವೂ ಗಣಪತ ಗಲ್ಲಿ ಸೇರಿದಂತೆ ಮಾರುಕಟ್ಟೆಯ ಬೇರೆಬೇರೆ ಭಾಗಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಅತಿಕ್ರಮಿತ ವಸ್ತುಗಳನ್ನು ವಶಕ್ಕೆ ಪಡೆದರು. ಅಂಗಡಿ ಮಾಲೀಕರಿಗೆ ಅತಿಕ್ರಮಣ ಮಾಡದಂತೆ ತಿಳಿ ಹೇಳಲಾಯಿತು. ಅತಿಕ್ರಮಣ ಮುಂದುವರೆದರೆ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದೆಂದು ಎಸಿಪಿ ಶಿವಾಜಿ ನಿಕ್ಕಮ್ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು. ಹಲವು ದಿನಗಳಿಂದ ನಡೆದ ಈ ಜಂಟಿ ಕಾರ್ಯಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Tags:

error: Content is protected !!