ಯಾವುದೆ ಅಧಿಕೃತ ಪರವಾನಗಿ ಇಲ್ಲದೆ ಅನಧಿಕೃತವಾಗಿ ದುಬಾರಿ ಬಡ್ಡಿ ವ್ಯವಹಾರ ಮಾಡುತ್ತಿರುವ ಘಟನೆ ಅಥಣಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ 10, 000 ಅಸಲಿಗೆ 2-3 ರೂ ತಿಂಗಳ ಬಡ್ಡಿ ವ್ಯವಹಾರವನ್ನ ನೋಡಿದ್ದೀವಿ ಆದ್ರೆ, ಪಟ್ಟಣದಲ್ಲಿ ಖಿಲಾಡಿ ದಂಪತಿ ಕಷ್ಟ ಅಂತಾ ಬಂದವರಿಗೆ ಸಿಕ್ಕಿದ್ದೆ ಚಾನ್ಸು ಅಂತಾ ದುಬಾರಿ ಬಡ್ಡಿಗೆ ಹಣ ಕೊಟ್ಟು ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಿರುವ ಘಟನೆಗಳು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಥಣಿ ಪಟ್ಟಣದ ನಿವಾಸಿ ಭಾಗೀರತಿ ರೂಪೇಶ ರಾಕ್ಷ ಎಂಬುವವರು ಸ್ನೇಹಲ ಶಿವಪ್ಪ ಕೋಳಿ, ದಂಪತಿಗೆ 20000 ರೂ ಹಣ ಕೊಟ್ಟು ವಾರಕ್ಕೆ 2000 ಬಡ್ಡಿ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.ಬಡ್ಡಿ ವಿಳಂಬವಾದ ಕಾರಣ ಮನೆಗೆ ಕರೆಯಿಸಿ ದಿನಪೂರ್ತಿ ಬೈದು ಹಣ ನೀಡುವಂತೆ ಹಿಂಸೆ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬಡ್ಡಿ ವ್ಯವಹಾರ ಮಾಡುತ್ತಿರುವ ಇವರು ಮೊದಲು ಬೈಕ್ ಅಥವಾ ಇನ್ನಿತರ ವಾಹನಗಳನ್ನ ಟಾರ್ಗೆಟ್ ಮಾಡಿ ಕಾಗದುಪತ್ರಗಳನ್ನ ಅಡ ಇಟ್ಟುಕೊಂಡು ಹಣ ನೀಡುತ್ತಾರೆ, ಹಣ ನೀಡಲು ವಿಳಂಬವಾದಲ್ಲಿ ವಾಹನಗಳನ್ನ ತಮ್ಮ ಹೆಸರಿಗೆ ನೋಂದಾಯಿಸಿಕೊಂಡು ಬಡ ಜನರಿಗೆ ಅನ್ಯಾಯ ಮಾಡುತ್ತಾರೆ ಅಂತಾ ಸಂತ್ರಸ್ಥೆ ಸ್ನೇಹಲ ಆರೋಪ ಮಾಡಿದ್ದಾರೆ. ಈ ಕುರಿತು ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ನ್ಯಾಯಕ್ಕಾಗಿ ಅಲೆದಾಡುತಿದಾರೆ.