ಕಾಗವಾಡ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸುಮಾರು ೧೩ ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿದ್ದು ಈ ಕಾಮಗಾರಿಗಳ ಶೀಘ್ರದಲ್ಲಿ ಪೂರ್ಣಗೊಳಿಸಲು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಶನಿವಾರ ಬೆಳಗ್ಗೆ ಶಾಸಕ ರಾಜು ಕಾಗೆ ಇವರು ತಾಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಅಭಿಯಂತ ಮಡಿವಾಳ ಪಾಟೀಲ, ಇವರ ಮುಖ್ಯ ಉಪಸ್ಥಿತಿಯಲ್ಲಿ ನಾಗನೂರು ಪಿಎ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಹತ್ತಿರದ ಸಮುದಾಯ ಭವನ ಕಟ್ಟಡಕ್ಕೆ, ಆಜೂರು ಗ್ರಾಮದಲ್ಲಿ ಬಯಲು ರಂಗಮAದಿರ, ಖಿಳೇಗಾಂವ ಗ್ರಾಮದ ಮಾದರ ಓಣಿಯಲ್ಲಿ ಮಾತಂಗಿ ದೇವಿ ಸಮುದಾಯ ಭವನ, ಶಿರೂರು ಗ್ರಾಮದಲ್ಲಿ ವಿಠ್ಠಲ ರುಕ್ಮೀಣಿ ಮಂದಿರ, ಅರಳಿಹಟ್ಟಿ ಗ್ರಾಮದಲ್ಲಿ ವಿಠ್ಠಲ ರುಕ್ಮಿಣಿ ಮಂದಿರ, ಜಕ್ಕಾರಟ್ಟಿ ಗ್ರಾಮದಲ್ಲಿ ಮಸೋಬಾ ಮಂದಿರ, ವಿಷ್ಣುವಾಡಿ ಗ್ರಾಮದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ, ನವಲಿಹಾಳ ಗ್ರಾಮದಲ್ಲಿ ಶ್ರೀ ಹನುಮಾನ ಮಂದಿರ ಹತ್ತಿರ ಸಮುದಾಯ ಭವನ ನಿರ್ಮಾಣಿಗೆ ಶಾಸಕ ರಾಜು ಕಾಗೆ ಇವರು ಭೂಮಿಪೂಜೆ ನೆರವೇರಿಸಿದರು. ಇದೆ ವೇಳೆ ಕೆಲ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಸುಕ್ಷೇತ್ರ ಖಿಳೆಗಾಂವ ಬಸವಣ್ಣ ಮಂದಿರದ ಸಮುದಾಯ ಭವನದಲ್ಲಿ ಮದಭಾವಿ ಹಾಗೂ ತೆಲ್ಸಂಗ್ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ರಾಜ್ಯ ಸರ್ಕಾರ ನೀಡುವ ಲ್ಯಾಪ್ಟಾಪ್ ಶಾಸಕರು ವಿತರಿಸಿ ಅಧಿಕಾರಿಗಳಿಗೆ ತುರ್ತು ಸೇವೆ ನೀಡಲು ಪೇಪರ ಲೆಸ್ ಕಾರ್ಯ ಮಾಡಲು ಕೆಲ ಸೂಚನೆಗಳು ನೀಡಿದರು. ರಾಜ್ಯದ ಮುಖ್ಯಮಂತ್ರಿಗಳು ಗ್ರಾಮದಲ್ಲಿರುವ ಅನೇಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಅವರಿಗೆ ಅವಶ್ಯಕತೆ ಇರುವ ಸೇವೆಗಳು ನೀಡಬೇಕು ಈ ಉದ್ದೇಶ ಇಟ್ಟುಕೊಂಡು ರಾಜೆದಂತ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ಟಾಪ್ ನೀಡಿದ್ದಾರೆ ಎಂದರು.
ಅಥಣಿ ತಹಶಿಲ್ದಾರ ಸಿದ್ದರಾಯ ಬೋಸಗೆ ಇವರು ಶಾಸಕರ ನೀಡಿರುವ ಸೂಚನೆಗಳು ಪಾಲಿಸಲು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ, ಉಪ ತಹಶಿಲ್ದಾರ್ ಅಮಿತಕುಮಾರ ದವಳೇಶ್ವರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ ವಿನಾಯಕ್ ಬಾಗಡಿ, ಕಾರ್ಯಕರ್ತರಾದ ವಿಶಾಲ ನಿಂಬಾಳ, ಘುಳಪ್ಪಾ ಜತ್ತಿ, ದೀಪಕ್ ಪೂಜಾರಿ, ರಾಯಪ್ಪ ಪಾಟೀಲ್, ರಮೇಶ್ ಪಾಟೀಲ್, ರಘು ಹಜಾರೆ, ಸಿದ್ದರಾಯ ವಾಗಮೊಡೆ, ಅರಳಿಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ್, ಸಿದ್ದು ಅವಳೆಕರ, ತಾನಾಜಿ ಶಿಂದೆ, ಸದಾಶಿವ್ ಪಾಟೀಲ್, ವಿಠ್ಠಲ್ ಕುಟ್ಟೆ, ಪ್ರಕಾಶ್ ಕುಟ್ಟೆ, ಸಿದ್ದು ಖಂಡೇಕರ್, ವಿನಾಯಕ್ ನಿಕಂ, ಅಶೋಕ್ ಸೂರ್ಯವಂಶಿ, ಭೀಮರಾವ್ ಖೋತ, ವಿಜಯ ಪವಾರ್, ಗುತ್ತಿಗೆದಾರರಾದ ಮಲ್ಲಿಕಾರ್ಜುನ ಠಕರ, ಶಿವಾನಂದ ಗೋಲಬಾವಿ, ಅನೀಲ ಶಿಂದೆ, ಮಹಾಂತೇಶ್ ಪಾಟೀಲ್, ಸುನಿಲ ಅವಟಿ ಸೇರದಂತೆ ಅನೇಕರು ಇದ್ದರು.
ಸುಕುಮಾರ್ ಬನ್ನೂರೆ
ಇನ್ನ ನ್ಯೂಸ ಕಾಗವಾಡ