ಮುಖ್ಯಮಂತ್ರಿ ಹಾಗೂ ಸಭಾಪತಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತ್ತು ಆದೇಶವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು
ಸದನದ ಚೌಕಟ್ಟನ್ನು ಮೀರಿ ವರ್ತಿಸಿದ್ದರ ಹಿನ್ನೆಲೆಯಲ್ಲಿ ಮಾರ್ಚ್ 21ರಂದು ನಡೆದಿದ್ದ ಅಧಿವೇಶನದಲ್ಲಿ ಬಿಜೆಪಿ 18 ಶಾಸಕರನ್ನು ಸಭಾಪತಿ ಯುಟಿ ಖಾದರ್ ಆರು ತಿಂಗಳು ಅಮಾನತ್ ಮಾಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡಿದರಲ್ಲದೆ ಕೋರ್ಟ್ ಮೆಟ್ಟಿಲು ಹತ್ತಲು ಸಿದ್ಧತೆ ನಡೆಸಿದ್ದರು. ಇದರ ಬೆಣ್ಣಲ್ಲಿ ಇಂದು ಸಭಾಪತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದನ ಸುರುಳಿತವಾಗಿ ನಡೆಸುವ ಅಗತ್ಯದಿಂದ ಶಾಸಕರ ಅಮಾನತ್ತು ಆದೇಶವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಜೊತೆಯಲ್ಲಿ ಟಿಸಿಎಂ ಡಿಕೆ ಶಿವಕುಮಾರ್ ಕಾನೂನು ಸಚಿವ ಹೆಚ್ ಕೆ ಪಾಟೀಲ್, ವಿರೋಧ ಪಕ್ಷದ ನಾಯಕ ಆರ್ ಅಶೋಕ, ಉಪಸಭಾಪತಿ ಸಿಎಂ ಕಾನೂನು ಸಲಹೆಗಾರ ಇತರರು ಸಭೆಯಲ್ಲಿ ಇದ್ದರು
ಈ ಕುರಿತು ಮಾಧ್ಯಮಗಳಿಗೆ ಸಭೆಯ ಮಾಹಿತಿ ನೀಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಶಾಸಕರ ಅಮಾನತ್ತು ನಿರ್ಧಾರ ಮುಂದುವರೆದರೆ ಅಧಿವೇಶನ ನಡೆಯುವುದು ಕಷ್ಟವಾಗುತ್ತದೆ. ಆಡಳಿತ ಪಕ್ಷ ಒಂದೇ ನಡೆಸಬೇಕಾಗುತ್ತದೆ. ಎಲ್ಲಾ ವಿಷಯಗಳ ಕುರಿತು ಒಂದು ಗಂಟೆಗಳ ಕಾಲ ಚರ್ಚೆಯಾಯಿತು. ವಿಧಾನಸಭೆ ಅಧಿವೇಶನ ಸುಸೂತ್ರವಾಗಿ ನಡೆಯಬೇಕು ಅಮಾನತ್ಕೊಂಡಿರುವ ಶಾಸಕರು ಕೂಡ ಈಗಾಗಲೇ ವಿಶಾದ ವ್ಯಕ್ತಪಡಿಸಿದ್ದರಿಂದ ಇಲ್ಲಿಗೆ ಅದನ್ನು ಮುಕ್ತಾಯ ಮಾಡಬೇಕೆಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಾನೂನು ಸಚಿವರು ಹಿನ್ನೆಲೆಯಲ್ಲಿ ಅಮಾನತು ಹಿಂಪಡೆಯುವುದು ಸೂಕ್ತವೆಂದು ಹೇಳಿದ್ದಾರೆ ಸ್ಪೀಕರ್ ಯುಟಿ ಖಾದರ್ ಅವರು 15 ದಿನ ಹಜ್ ಯಾತ್ರೆಗೆ ಹೋಗಲಿದ್ದಾರೆ. ವಿವಿಧ ಸಮಿತಿಗಳಲ್ಲಿ ಶಾಸಕರು ಭಾಗವಹಿಸುತ್ತಿಲ್ಲ ಅಧ್ಯಯನ ಪ್ರವಾಸಗಳು ನಿರ್ಧಾರವಾಗಿದ್ದರೂ ಹೋಗುತ್ತಿಲ್ಲ. ಹಿನ್ನೆಲೆಯಲ್ಲಿ ಸದನ ಸರಳವಾಗಿ ನಡೆಯಬೇಕು ಎಂಬ ಇಚ್ಛೆಯನ್ನು ಒಕ್ಕೊರಲಿನಿಂದ ಎಲ್ಲರೂ ಸೇರಿ ಇಲ್ಲಿಗೆ ಮುಗಿಸಲು ಒಪ್ಪಿಕೊಂಡಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿ ನಾನು ಕೂಡ ಇವರೆಲ್ಲರ ಸಂಪರ್ಕದಲ್ಲಿದ್ದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜ, ಅದನ್ನು ಎಲ್ಲರೂ ಸರ್ಕಾರಾತ್ಮಕವಾಗಿ ತೆಗೆದುಕೊಂಡು ಕೆಲಸ ಮಾಡುತ್ತಾ ಮುನ್ನಡೆಯಬೇಕು. ಸದನದ ಗೌರವ ದೃಷ್ಟಿಯಿಂದ ಮಾತನಾಡಿದ್ದೇನೆ ಮುಖ್ಯಮಂತ್ರಿಗಳು ಮತ್ತು ಸಭಾಪತಿ ಸಹ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸುಖಾಂತ್ಯ ವಾಗುವ ಭರವಸೆ ನನಗಿದೆ.
ಎಂದು ಹೇಳಿದರು